ಧಾರವಾಡ; ಸೇವಾನಿರತ ಶಿಕ್ಷಕರುಗಳಿಗೆ (ಟಿಇಟಿ) ಶಿಕ್ಷಕರ ಅರ್ಹತಾ ಪರೀಕ್ಷೆ ನಿಗದಿಗೊಳಿಸಿರುವುದನ್ನು ಕೈಬಿಡಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ನ. ೨೪ ರಂದು ನವದೆಹಲಿಯ ಜಂತರ ಮಂತರದಲ್ಲಿ ಒಂದು ದಿವಸದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಶಿಕ್ಷಕರ ಫೆಡರೇಷನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದ್ದಾರೆ. ಈ ಕುರಿತು ಇಂದು ಹೇಳಿಕೆ ನೀಡಿರುವ ಅವರು, ರಾಷ್ಟ್ರಮಟ್ಟದ ಈ ಹೋರಾಟದಲ್ಲಿ ಎಲ್ಲ ರಾಜ್ಯಗಳ ಶಿಕ್ಷಕ ಪ್ರತಿನಿಧಿಗಳು ಭಾಗವಹಿಸಲಿದ್ದು, ಇದು ಪ್ರಥಮ ಹಂತದ ಹೋರಾಟವಾಗಿದೆ. ಸೇವಾನಿರತ ಶಿಕ್ಷಕರುಗಳಿಗೆ ಶಿಕ್ಷಕರ ಆರ್ಹತಾ ಪರೀಕ್ಷೆ ರದ್ದಾಗುವ ವರೆಗೆ ವಿವಿಧ ಹಂತದ ಹೋರಾಟಗಳನ್ನು ಹಂತ ಹಂತವಾಗಿ ಹಮ್ಮಿಕೊಳ್ಳಲು ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನ