ಹುಬ್ಬಳ್ಳಿ: ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಕಣ್ಣಿಗೆ ಕಾರದ ಪುಡಿ ಎರಚಿ ಹಲ್ಲೆ ಮಾಡಿರುವ ಘಟನೆ ನವನಗರದಲ್ಲಿ ಕಳೆದ ದಿನ ನಡೆದಿದೆ. ಸಂಜೀವ, ರಫೀಕ್, ಅಬ್ದುಲ್, ಹನೀಫ್, ಅಲ್ಲಾಭಕ್ಷ, ಮಣಿಕಂಠ, ಅಜಾದ್ ಸೇರಿದಂತೆ ೧೫ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ನಿಜಗುಣಯ್ಯ, ವೀರಭದ್ರಯ್ಯ, ಸಂಗಯ್ಯ, ಮಹಾಲಿಂಗಯ್ಯ, ಶಿವಣ್ಣ ಎಂಬುವರ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡಿದ್ದಾರೆ. ಸುತಗಟ್ಟಿ ವ್ಯಾಪ್ತಿಯಲ ಗಾಯಾಳು ನಿಜಗುಣಯ್ಯ ಅವರ ಹಾಗೂ ಆರೋಪಿತರ ಹೊಲಗಳಿದ್ದು, ಜಮೀನಿನ ಹಿಸ್ಸಾ ಸಲುವಾಗಿ ಆಗಾಗ ಜಗಳ ನಡೆದುಕೊಂಡು ಬಂದಿದ್ದು, ಕಳೆದ ದಿನ ಕೂಡ ಹೊಲದಲ್ಲಿ ಬೆಳೆ ಹಾನಿ ಮಾಡಿ ಶೆಡ್ಡಿನ ಬಾಗಿಲು ಮುರಿದು ಆರೋಪಿತರು ಹಾನಿ ಮಾಡಿದ್ದಾರೆ. ಇದಾದ ಬಳಿಕ ನವನಗರದ ಪೋಸ್ಟ್ ಆಫೀಸ್ ಬಳಿ ಗಾಯಾಳುಗಳು ಮನೆಗೆ ಹೋಗ