ಮೈಸೂರು: ನಗರದಲ್ಲಿ ನಡೆಯುತ್ತಿರುವ ಯುವ ಸಂಭ್ರಮದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಸಂದೇಶ
Mysuru, Mysuru | Sep 16, 2025 ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ‘ಯುವಸಂಭ್ರಮ’ದಲ್ಲಿ ಮಂಗಳವಾರದ ದೇಶ ಪ್ರೇಮ, ಕನ್ನಡ ನಾಡು ನುಡಿ , ರಾಷ್ಟ್ರೀಯತೆ,ಜಾನಪದ, ಮಹಿಳಾ ಸಬಲೀಕರಣ, ಜೈ ಜವಾನ್– ಜೈ ಕಿಸಾನ್, ಆಪರೇಷನ್ ಸಿಂಧೂರ್ ಕುರಿತ ವಿವಿಧ ನೃತ್ಯರೂಪಕಗಳು ಯುವ ಸಮೂಹವನ್ನು ಕುಣಿದು ಕುಪ್ಪಳಿಸುವಂತೆ ಮೂಡಿ ಬಂದವು. ಆರನೇ ದಿನವಾದ ಇಂದು ಬಯಲು ರಂಗಮಂದಿರ ಕಿಕ್ಕಿರಿದು ತುಂಬಿ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆಯ ಕಡಲಲ್ಲಿ ತೇಲಿದರು.