ಸಿಎಂ ಸಿದ್ದರಾಮಯ್ಯ ಸ್ನೇಹಿತನ ಮಗ ಹಾಗೂ ಆತನ ಬ್ಯುಸಿನೆಸ್ ಪಾರ್ಟ್ನರ್ ವಿರುದ್ಧ ವಂಚನೆ ಆರೋಪ..! ಕೇಳಿ ಬಂದಿದ್ದು, NRI ಗೆ 17 ಕೋಟಿ ವಂಚನೆ ಮಾಡಿರುವ ಆರೋಪ ಸದ್ಯ ಬೆಳಕಿಗೆ ಬಂದಿದೆ. ಬನಶಂಕರಿ ಠಾಣೆಯಲ್ಲಿ ಸಿದ್ದರಾಮಯ್ಯ ಸ್ನೇಹಿತನ ಮಗನ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸ್ನೇಹಿತ ವೆಂಕಟೇಶ್ ಎಂಬುವರ ಮಗನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಸ್ನೇಹ ರಾಕೇಶ್, ರಜತ್ ವೆಂಕಟೇಶ್, ರಾಬಿನ್ ಫ್ರಾನ್ಸಿಸ್ ಎಂಬುವರ ವಿರುದ್ಧ ಬನಶಂಕರಿ ಠಾಣೆಯಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಎಫ್ ಐಆರ್ ದಾಖಲಾಗಿದೆ. ತೇಜಸ್ವಿ ಮರಿಯಪ್ಪ ಎಂಬ NRI ನಿಂದ ಬನಶಂಕರಿ ಠಾಣೆಗೆ ದೂರು ನೀಡಲಾಗಿದೆ. ಬಿಡ್ಡಿಂಗೊಂದು ಖರೀದಿ ನೆಪದಲ್ಲಿ ನಕಲಿ ಸಹಿಯ ಚೆಕ್ ನೀಡಿ ಬಿಲ್ಡಿಂಗ್ ಪತ್ರ ಪಡೆದು ವಂಚನೆ