ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಶ್ರೀ ಸಾಯಿಬಾಬಾ ಮಂದಿರದಲ್ಲಿ ಭ್ರಷ್ಟಾಚಾರ, ದುರಾಢಳಿತ ನಡೆಯುತ್ತಿದ್ದು, ಈ ಮೂಲಕ ತನಿಖೆ ನಡೆಸಬೇಕು ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮಂದಿರದಲ್ಲಿ ಆಗುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಈಗಿನ ಅಧ್ಯಕ್ಷರು ಮಾಡುತ್ತಿರುವ ಭ್ರಷ್ಟಾಚಾರದ ಧೋರಣೆ ಖಂಡನೀಯ ಎಂದರು. ದೇವಸ್ಥಾನದ ಪಾವಿತ್ರತೆ ಕಾಪಾಡಬೇಕಿದೆ ಈ ವಿಷಯವಾಗಿ ದಾಖಲೆಗಳು ಇವೆ ಸರ್ಕಾರ ಗಮನಕ್ಕೆ ತಗೆದುಕೊಳ್ಳಬೇಕು. ಕಮೀಟಿಯಲ್ಲಿ ಎಲ್ಲ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಬೇಕು ಜೊತೆಗೆ ಎರಡು ದಿನದಲ್ಲಿ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ. ಅಲ್ಲದೇ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಬೇಕು. ಅಕ್ರಮ