ಶಿರಸಿ: ಉತ್ತರ ಕನ್ನಡ ಸಾವಯವ ಒಕ್ಕೂಟದ ಕಚೇರಿಯಲ್ಲಿ ಎರಡು ದಿನಗಳ ಬೀಜ ಮೇಳ ಹಾಗೂ ಮಲೆನಾಡು ಮೇಳಕ್ಕೆ ಚಾಲನೆ
ಶಿರಸಿ : ಉತ್ತರಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯ ಸಹಯೋಗದಲ್ಲಿ ನಗರದ ಉತ್ತರಕನ್ನಡ ಸಾವಯವ ಒಕ್ಕೂಟದ ಕಚೇರಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಾಂಪ್ರದಾಯಿಕ ತರಕಾರಿ ಬೀಜ ಮೇಳ ಹಾಗೂ ಮಲೆನಾಡು ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಮೇಳದಲ್ಲಿ 35ಕ್ಕೂ ಹೆಚ್ಚು ತರಕಾರಿ ಬೀಜ ಸಂರಕ್ಷಕರು ಭಾಗವಹಿಸಿದ್ದರು. ರೈತರು ಹಾಗೂ ರೈತ ಮಹಿಳೆಯರು ತಮ್ಮ ಕೈತೋಟದಲ್ಲಿ ಬೆಳೆಸಿದ ವಿವಿಧ ನಾಟಿ ತರಕಾರಿ ಬೀಜಗಳನ್ನು ಹಾಗೂ ಹೂವಿನ ಗಿಡ, ಸಸಿಗಳನ್ನು ಮತ್ತು ಗೃಹ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸುವ ಜತೆ ಮಾರಾಟ ಕೂಡ ಮಾಡಿದರು.