ಹುಬ್ಬಳ್ಳಿ: ಇಂದು ಪ್ರಾರಂಭವಾದ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಗಳನ್ನು ಸಲ್ಲಿಸಿ ಮಾತನಾಡಿದ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೇoಗಿನಕಾಯಿ ನಾಡಿನ ಖ್ಯಾತ ಸಾಹಿತಿ ಸಾಹಿತಿ ಪದ್ಮಭೂಷಣ ದಿವಂಗತ ಎಸ್ ಎಲ್ ಬೈರಪ್ಪ ನವರನ್ನು ನೆನಪಿಸಿ ಮಾತನಾಡಿ ಅವರು ಬೈರಪ್ಪನವರಿಗೆ ಹಳೆ ಮೈಸೂರು ಜಿಲ್ಲೆ ಹಾಗೂ ಬಿಡಿಸಲಾರದ ನಂಟು ಹುಬ್ಬಳ್ಳಿಯ ವಿದ್ಯಾನಗರದ ಕಾಡ ಸಿದ್ದೇಶ್ವರ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಮನೋಶಾಸ್ತ್ರ ಉಪನ್ಯಾಸಕರಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ಭವಿಷ್ಯದ ಖ್ಯಾತಿ ಹುಬ್ಬಳ್ಳಿಯಿಂದಲೇ ಪ್ರಾರಂಭವಾಗಿದ್ದು ಗಮನಾರ್ಹ ಸಂಗತಿ ಎಂದು ಮಹೇಶ ಟೇoಗಿನಕಾಯಿ ನೆನಪಿಸಿಕೊಂಡರು.