ಆದಿವಾಲ ಗ್ರಾಮದ ಭಾಗ 2 ರಲ್ಲಿ ನೂತನ ಶುಧ್ಧ ಕುಡಿಯುವ ನೀರಿನ ಘಟಕವನ್ನ ಸಚಿವ ಡಿ ಸುಧಾಕರ್ ಉದ್ಘಾಟಿಸಿದ್ದಾರೆ. ಬಾನುವಾರ ಮಧ್ಯಾಹ್ನ 3 ಗಂಟೆಗೆ ಹಿರಿಯೂರು ತಾಲೂಕಿನ ಆದಿವಾಲ ಭಾಗ 2 ರ ಕಾಲೋನಿಯಲ್ಲಿ ಶುಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ ಸಚಿವ ಡಿ ಸುಧಾಜರ್ ಗ್ರಾಮಸ್ಥರಿಗೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ