ಉರುಳಿಗೆ ಚಿರತೆಯೊಂದು ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂರ್ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಭಾನುವಾರ ಸಂಜೆ 5 ಗಂಟೆಗೆ ಪ್ರಕರಣ ಬೆಳಕಿಗೆ ಬಂದಿದೆ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಅರಣ್ಯ ವಲಯ, ತಾಳಗುಂದ ಬಳಿಯ ಕಾಡಿನಂಚಿನ ಹೊಲದಲ್ಲಿ ನಡೆದಿದೆ. ತಾಳಗುಂದ ಅರಣ್ಯ ವ್ಯಾಪ್ತಿಯ ಖಾಸಗಿ ಜಮೀನಿನ ಅಂಚಿನಲ್ಲಿ ಕಾಡುಪ್ರಾಣಿಗಳಿಗೆ ಹಾಕಿದ ಉರುಳಿಗೆ ಚಿರತೆ ಬಿದ್ದಿರುವುದು ಪತ್ತೆಯಾಗಿದೆ. ಕಾಡಿನಲ್ಲೆ ಉರುಳು ಹಾಕಿರುವ ಸಾಧ್ಯತೆ ಕಂಡು ಬಂದಿದ್ದು, ಕೊಳೆತ ಸ್ಥಿತಿಯಲ್ಲಿ ಚಿರತೆ ಮೃತದೇಹ ಪತ್ತೆಯಾಗಿದೆ. ಚಿರತೆಯ ಕತ್ತಿನಲ್ಲೇ ಉರುಳು ಇರುವುದು ಕಂಡು ಬಂದಿದೆ, ಉರುಳಿಗೆ ಬಿದ್ದ ಚಿರತೆ ಎಳೆದುಕೊಂಡು ಸ್ವಲ್ಪ ದೂರ ಬಂದು ನರಳಿ ಸತ್ತಿರುವ ಸಾಧ್ಯತೆ ಕಂಡುಬಂದಿದೆ.