ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾಡಳಿತದ ಹೊಸ ನಿಯಮ ಸ್ಥಳೀಯ ಹಳದಿ ಬೋರ್ಡ್ ಮಾಲೀಕರಿಗೆ ಬಿಸಿ ತುಪ್ಪ..!? ಯಾಕೆ ಗೊತ್ತಾ..?.
ಇಷ್ಟು ದಿನ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಸ್ಥಳೀಯ ಹಳದಿ ಬೋರ್ಡ್ ವಾಹನ ಅಥವಾ ಹಳದಿ ಬೋರ್ಡ್ ಕಾರು ಮಾಲೀಕರು ಯಾವುದೇ ತೊಡಕುಗಳಿಲ್ಲದೆ ದತ್ತಪೀಠ, ಮುಳ್ಳಯ್ಯನಗಿರಿ ಸೇರಿದಂತೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹೋಗಿ ಬರುತ್ತಿದ್ದರು. ಅಲ್ಲದೆ ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ಪೋಸ್ಟ್ ಬಳಿ ವಾಹನಗಳಿಗೆ ವಿಧಿಸುವ ಶುಲ್ಕಗಳನ್ನ ಪಾವತಿಸಿ ನೇರವಾಗಿ ಪ್ರವಾಸಿ ತಾಣಗಳಿಗೆ ಪ್ರವೇಶಿಸುತ್ತಿದ್ದರು. ಆದರೆ ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಇದೀಗ ಹೊಸ ನಿಯಮ ಜಾರಿ ಮಾಡಿರುವುದು ಸ್ಥಳೀಯ ಹಳದಿ ಬೋರ್ಡ್ ವಾಹನ ಸವಾರರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಬಗ್ಗೆ ಪ್ರವಾಸಧ್ಯಮ ಇಲಾಖೆ ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಹೊರಡಿಸಿರುವ ಆದೇಶ ಪ್ರತಿಯಲ್ಲಿ ತಿಳಿಸಿದಂ