ಚಿಕ್ಕಮಗಳೂರು: ಮುಸ್ಲಿಂ ಹಾಸ್ಟಲ್ ಎಲೆಕ್ಷನ್ ಬಡಿದಾಟ, ಮತ್ತಷ್ಟು ತಾರಕಕ್ಕೇರಿದ ತಿಕ್ಕಾಟ.!. ಚಿಕ್ಕಮಗಳೂರು ಜಿಲ್ಲಾಧಿಕಾರಿ ಅಂಗಳಕ್ಕೆ ತಲುಪಿದ ಪ್ರಕರಣ..!.
ಮುಸ್ಲಿಂ ಹಾಸ್ಟೆಲ್ ಕಮಿಟಿ ಚುನಾವಣೆಯ ವಿಚಾರದಲ್ಲಿ ಎರಡು ಬಣಗಳು ಬಡಿದಾಡಿಕೊಂಡಿದ್ದ ಘಟನೆ ಕಳೆದ ಮಂಗಳವಾರ ಚಿಕ್ಕಮಗಳೂರು ನಗರದಲ್ಲಿ ನಡೆದಿತ್ತು. ಅಲ್ ಅಮೀನ್ ಮಹಮ್ಮದ್ ಹುಸೇನ್ ವಕ್ಫ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ ವಿಚಾರವಾಗಿ ತಾಜಿರನ್ ಶಾದಿ ಮಹಲ್ ನಲ್ಲಿ ಕರೆಯಲಾಗಿದ್ದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಒಂದು ಬಣದ ಸದಸ್ಯರು ಅವಿರೋಧ ಆಯ್ಕೆಯ ಮೂಲಕ ಕಮಿಟಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರೆ, ಇನ್ನೊಂದು ಬಣ ಚುನಾವಣೆಯ ಮೂಲಕವೇ ಸದಸ್ಯರನ್ನು ಆಯ್ಕೆ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದರು. ಈ ವೇಳೆ ಎರಡೂ ಬಣಗಳ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು ಈಗ ಈ ಗಲಾಟೆ