ಶಾಲೆ ಮಕ್ಕಳನ್ನು ಠಾಣೆಗೆ ಬರಮಾಡಿಕೊಂಡು ಪೊಲೀಸ್ ಠಾಣೆಯ ಕಾರ್ಯ ವೈಖರಿ, ಪೋಲೀಸರ ದೈನಂದಿನ ಕರ್ತವ್ಯಗಳು, ಪೊಲೀಸ್ ಠಾಣೆಯಲ್ಲಿ ಬಳಸುವ ಆಯುಧಗಳು, ಮಕ್ಕಳ ಹಕ್ಕುಗಳು, ಮಕ್ಕಳಿಗೆ ಇರುವ ಕಾನೂನುಗಳು, ಇತರೆ ಕಾನೂನಿನ ಬಗ್ಗೆ ಗುರುವಾರ ಸಂಜೆ 4 ಗಂಟೆಗೆ ಅರಿವು ಮೂಡಿಸಲಾಯಿತು. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪಿಎಸ್ಐ ಶಿವನ ಗೌಡ ಪಟೇಲ್ ಇವರು ಹೊನ್ನೇತಾಳ್ ಮಕ್ಕಳಿಗೆ ಕೂಲಂಕುಶವಾಗಿ ಠಾಣೆಯ ಕುರಿತು ಮಾಹಿತಿ ನೀಡಿದರು. ಪಿಎಸ್ ಐ ಕೊಠಡಿ, ರಿಸೆಪ್ಶನ್, ರೆಕಾರ್ಡ್ ರೂಮ್, ಕಂಪ್ಯೂಟರ್ ಕೊಠಡಿ, ಮಕ್ಕಳ ಸ್ನೇಹಿ ಕೊಠಡಿ, ಮಹಿಳಾ ಬಂದಿಖಾನೆ, ಪುರುಷರ ಬಂದಿಖಾನೆ, ದಾಖಲೆ ಮತ್ತು ಕಡತೆಗಳ ಕೊಠಡಿ, ಶ್ರಸ್ತ್ರ ಗಾರ ಕೊಠಡಿ ಕುರಿತು ಮಾಹಿತಿ ನೀಡಿದರು.