ಮನೆಗಳ್ಳತನ ಮಾಡಿದ್ದ ಕಳ್ಳ ಹಾಗೂ ಆತನನ್ನೇ ಅಡ್ಡಗಟ್ಟಿ ದೋಚಿದ್ದ ನಾಲ್ವರ ಸಹಿತ ಐವರು ಆರೋಪಿಗಳನ್ನ ಅವಲಹಳ್ಳಿ ಠಾಣೆ ಪೊಲೀಸರು ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಬಂಧಿಸಿದ್ದಾರೆ. ಆರೋಪಿಗಳಿಂದ 447 ಗ್ರಾಂ ಚಿನ್ನಾಭರಣ, ನಗದು ಸಹಿತ 70 ಲಕ್ಷ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 22ರಂದು ರಾತ್ರಿ ಮಂಡೂರಿನಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ಇಸಾಯಿರಾಜ್, 90 ಗ್ರಾಂ ಚಿನ್ನಾಭರಣ 1.75 ಲಕ್ಷ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ. ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ಮಂಡೂರು ಸ್ಮಶಾನದ ಪಕ್ಕದಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ಮೌನೇಶ್ ರಾವ್, ದರ್ಶನ್, ಚಂದನ್ ಮತ್ತು ಸುನಿಲ್ ಕಣ್ಣಿಗೆ ಬಿದ್ದ ಇಸಾಯಿ ರಾಜ್ನನ್ನ ಅವರು ತಡೆದು ನಿಲ್ಲಿಸಿದ್ದರು.