ಮಂಡ್ಯ: ಸವಿತಾ ಸಮಾಜದ ವಿರುದ್ದ ವಿ. ಪ ಸದಸ್ಯ ಸಿ.ಟಿ ರವಿ ಅವಹೇಳನ ಹೇಳಿಕೆ ಖಂಡಿಸಿ ನಗರದಲ್ಲಿ ಪ್ರತಿಭಟನೆ
Mandya, Mandya | Oct 31, 2025 ಸವಿತಾ ಸಮಾಜದ ವಿರುದ್ದ ವಿ ಪ ಸದಸ್ಯ ಸಿ.ಟಿ ರವಿ ಅವಹೇಳಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಯಿತು. ಸಂಜಯ್ ವೃತ್ತದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸವಿತಾ ಸಮಾಜ ಹಾಗೂ ಹಿಂದುಳಿದ ವರ್ಗಗಳ ಸಮುದಾಯ ಮುಖಂಡರು ನೇತೃತ್ವ ವಹಿಸಿದ್ದರು. ಸಿ.ಟಿ ರವಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ನಿರಂತರವಾಗಿ ರಾಜಕೀಯ ವ್ಯಕ್ತಿಗಳಿಂದ ಸಮಾಜಕ್ಕೆ ಅನ್ಯಾಯವಾಗ್ತಿದೆ. ಈ ರೀತಿಯ ಹೇಳಿಕೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು.ತಕ್ಷಣವೇ ಸಿ.ಟಿ ರವಿ ಕ್ಷಮೆಯಾಚಿಸಬೇಕು. ಜೊತೆಗೆ ಕಾನೂನು ಕ್ರಮಕ್ಕೆಸರ್ಕಾರ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.