ಶಹಾಬಾದ: ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಅಪಮಾನ ಖಂಡಿಸಿ ಭಂಕೂರು ಕ್ರಾಸ್ ಬಳಿ ರಸ್ತೆ ತಡೆದು ಟೈರಗೆ ಬೆಂಕಿ ಹಚ್ಚಿ ಪ್ರತಿಭಟನೆ
ಕಲಬುರಗಿ : ಕಲಬುರಗಿ ಜಿಲ್ಲೆ ಶಹಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಮೂರ್ತಿಯ ಕೈ ಮುರಿದು ಅಪಮಾನ ಮಾಡಿದ್ದನ್ನ ಖಂಡಿಸಿ ಭಂಕೂರು ಕ್ರಾಸ್ ಬಳಿ ಸಮಾಜದ ಜನರು ರಸ್ತೆ ತಡೆ ನಡೆಸಿ ಟೈರಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.. ಅ ೧೦ ರಂದು ಮಧ್ಯಾನ 1 ಗಂಟೆಗೆ ಭಂಕೂರು ಕ್ರಾಸ್ ಬಳಿ ನೂರಾರು ಜನ ರಸ್ತೆ ತಡೆ ನಡೆಸಿ ಟೈರಗೆ ಬೆಂಕಿ ಹಚ್ಚಿ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅಪಮಾನ ಮಾಡಿದ್ದನ್ನ ತೀವ್ರವಾಗಿ ಖಂಡಿಸಿದರು.. ಇನ್ನೂ ಕೂಡಲೇ ಕಿಡಿಗೇಡಿಗಳನ್ನ ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.