Public App Logo
Jansamasya
News
पुलिस
Bjp
National
Bihar
बिहार
कांग्रेस
बीजेपी
विधायक
Congress
Modi
Delhi
Viral
Crime
Odisha
Rajasthan
अमित_शाह
दिल्ली
Breakingnews
Madhya_pradesh
Pmmodi
Ipl
Rahulgandhi
Haryana
Cricket
तेजस्वी_यादव
शादी
Crimenews
Kolkata

ಕೃಷ್ಣರಾಜಪೇಟೆ: ಶೀತಪೀಡಿತ ಗ್ರಾಮಗಳ ರೈತರಿಗೆ ಪರಿಹಾರ ನೀಡಲು ವಿಳಂಬ, ಕೋರ್ಟ್ ಆದೇಶದಂತೆ ಕೆ.ಆರ್. ಪೇಟೆ ಹೇಮಾವತಿ ನೀರಾವರಿ ಇಲಾಖೆ ಕಛೇರಿ ಸಾಮಗ್ರಿ ಜಪ್ತಿ

Krishnarajpet, Mandya | Oct 28, 2025
ಶೀತಪೀಡಿತ ಗ್ರಾಮಗಳ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ಕೋರ್ಟ್ ಆದೇಶದಂತೆ ಕೆ.ಆರ್. ಪೇಟೆ ಹೇಮಾವತಿ ನೀರಾವರಿ ಇಲಾಖೆ ಕಛೇರಿ ಸಾಮಗ್ರಿ ಜಪ್ತಿ ಮಾಡಲಾಯಿತು. ಮಂಗಳವಾರ ಮಧ್ಯಾಹ್ನ ಪಟ್ಟಣದ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯದ ಆದೇಶದಂತೆ, ಹೇಮಾವತಿ ಜಲಾಶಯ ಯೋಜನೆಯ ನಂ.3ರ ವಿಭಾಗ ಕಛೇರಿ ಪೀಠೋಪಕರಣಗಳು ಹಾಗೂ ಸಾಮಗ್ರಿಗಳನ್ನು ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಗಂಗನಹಳ್ಳಿ ಹಾಗೂ ಕಳ್ಳನಕೆರೆ ಗ್ರಾಮಸ್ಥರು ತೆರಳಿದರು. ಶೀತಪೀಡಿತ ಗ್ರಾಮಗಳ ರೈತರಿಗೆ ರಾಜ್ಯ ಸರ್ಕಾರವು ಸೂಕ್ತ ಪರಿಹಾರವನ್ನು ನೀಡದೆ ಬೇಜವಾಬ್ದಾರಿತನ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಸಿವಿಲ್ ನ್ಯಾಯಾಲಯವು ನಂ.03 ಕಾರ್ಯಪಾಲಕ ಅಭಯಂತರರ ಕಛೇರಿಯ ಪೀಠೋಪಕರಣ ಜಪ್ತಿ ಆದೇಶ ನೀಡಿದೆ.