ಸಚಿವ ರಾಮಲಿಂಗ ರೆಡ್ಡಿ ಅವರು ಜಿಬಿಎ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರೇಸ್ ಕೋರ್ಸ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, ಐದು ಮಹಾನಗರ ಪಾಲಿಕೆಗಳು, ದಕ್ಷಿಣದ್ದು ಒಂದು ಮೀಟಿಂಗ್ ಆಗಿದೆ. ಮೀಸಲಾತಿ ಆಗಿರಲಿಲ್ಲಾ ಆದ್ರು ಅಭ್ಯರ್ಥಿಗಳ ಅರ್ಜಿಯನ್ನ ಕರೆದಿದ್ರು. ಅರ್ಜಿಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದಿವೆ. ಜನರಲ್ ನಲ್ಲಿ ಬಹಳ ಅರ್ಜಿಗಳು ಬಂದಿವೆ. ಇನ್ನೂ ಟೈಮ್ ಇದೆ ಏಪ್ರಿಲ್ ಗೆ ಎಕ್ಸಾಮ್ಸ್ ಮುಗಿದಿರುತ್ತೆ. ಜೂನ್ ನಲ್ಲಿ ಮಳೆ ಇದೆ ಹಾಗಾಗಿ ಮೇ ತಿಂಗಳಲ್ಲೆ ಎಲ್ಲಾ ಮುಗಿಯುತ್ತೆ. ಜನ ಯೋಚನೆ ಮಾಡಿ ಮತ ಹಾಕಿದ್ರೆ ಐದು ಪಾಲಿಕೆ ನಾವೇ ಗೆಲ್ತಿವಿ. ಬೆಂಗಳೂರಿಗೆ ಕಾಂಗ್ರೆಸ್ ಹೆಚ್ಚು ಕೊಡುಗೆ ಕೊಟ್ಟಿದೆ. ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ ಹೆಚ್ಚು ಕೊಡುಗೆ ಕೊಟ್ಟಿದೆ.