ಅಂಬಿಗರ ಹತ್ತನೇ ಶರಣ ಸಂಸ್ಕೃತಿ ಉತ್ಸವ 2026 ವಚನ ಗ್ರಂಥ ಮಹಾರಥೋತ್ಸವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಶೀಲಾ ಮಂಟಪ ಕೆಂಚನ ಪುತ್ತಳಿ ಲೋಕಾರ್ಪಣೆ ಹಾಗೂ ಶ್ರೀ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆಯನ್ನು ಜನವರಿ 14 ಹಾಗೂ 15ರಂದು ಮಾಡಲಾಗುವುದೆಂದು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧಿಪತಿಗಳಾದ ಪರಮ ಶಾಂತ ಭೀಷ್ಮ ಚೌಡಯ್ಯನವರು ಮಂಗಳವಾರ 11 ಗಂಟೆಗೆ ತಿಳಿಸಿದರು. ರಾಯಚೂರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜನವರಿ 14ರಂದು ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಲು ಕಾರ್ಯಕ್ರಮ ಸಾಮೂಹಿಕ ರಕ್ತದಾನ ಸೇರಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು