ಜೆಜೆ ಎಂ ಕಾಮಗಾರಿ ಶೀಘ್ರ ಪುರ್ಣಗೊಳಿಸಲು ನಿರ್ಧರಿಸಿದೆ ಎಂದು ದೊಡ್ಡರು ಕರಪನಹಳ್ಳಿ ಗ್ರಾ.ಪಂ ಅಧ್ಯಕ್ಷ ಜೆ.ಸುರೇಶ್ ಹೇಳಿದರು. ಇಂದು ಗ್ರಾ.ಪಂ ಸಭೆಯಲ್ಲಿ ಮಾತನಾಡಿ ಕಸ ಸಂಗ್ರಹಣಾ ವಾಹನ ಎಲ್ಲಾ ಗ್ರಾಮಗಳಿಗೆ ಹೋಗುತ್ತಿದ್ದರೂ ಬಹಳಷ್ಟು ಮಂದಿ ವಾಹನಕ್ಕೆ ಕಸವನ್ನು ನೀಡದೆ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕೆಜಿಎಫ್ ಬಂಗಾರಪೇಟೆ ಮಾರ್ಗದ ಮುಖ್ಯರಸ್ತೆಯಲ್ಲಿ ಸಹ ಕಸವನ್ನು ಎಸೆಯುವ ಮೂಲಕ ಗ್ರಾಮಗಳ ಸ್ವಚ್ಚತೆ ಹಾಳು ಮಾಡುತ್ತಿದ್ದಾರೆ ಎಂದು ವಿಷಾದಿಸಿದರು. ಬೇಕಾಬಿಟ್ಟಿ ಕಸ ಹಾಕುವುದರಿಂದ ಜೆಸಿಬಿ ಬಳಸಿ ವಾರಕ್ಕೊಮ್ಮೆ ಸ್ವಚ್ಚ ಮಾಡುವುದರಿಂದ ಪಂಚಾಯಿತಿಗೆ ಹಣಕಾಸಿನ ಹೊರೆ ಹೆಚ್ಚಿದೆ. ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರಿಗೆ ದಂಡ ಹಾಕುವ ಜೊತೆಗೆ ಪಂಚಾಯಿತಿಯ ಸೌಲಭ್ಯ ಕಡಿತ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.