ಸೊರಬ ತಾಲೂಕಿನಲ್ಲಿ ಕಾಡಾನೆ ದಾಂದಲೆ ಮುಂದುವರೆದಿದೆ. ಭಾನುವಾರ ಬೆಳಗಿನ ಜಾವ 6 ಗಂಟೆಗೆ ಬರಗಿ ಸಮೀಪದ ಸಣ್ಣಮನೆ ಗ್ರಾಮದಲ್ಲಿ ಕಾಡಾನೆ ದಾಂದಲೆ ನಡೆಸಿ ಬಾಳೆ ತೋಟ ನಾಶ ಪಡಿಸಿವೆ. ಬಾಳೆತೋಟ ಕಳೆದುಕೊಂಡ ರೈತ ಕಣ್ಣೀರಿಟ್ಟಿದ್ದಾರೆ. ಈಗಾಗಲೇ ಸಾಗರ ಹಾಗೂ ಸೊರಬ ಗಡಿ ಭಾಗದಲ್ಲಿ ಕಾಡಾನೆ ಓಡಿಸುವ ಆರಂಭವಾಗಿದ್ದು ಆದಷ್ಟು ಬೇಗ ಕಾಡಾನೆ ಓಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕಾಡಾನೆಗಳು ನೂರಾರು ಬಾಳೆ ಗಿಡ ನಾಶಪಡಿಸಿವೆ.