ಶಿಕಾರಿಪುರ: ಶಿಕಾರಿಪುರದಲ್ಲಿ ಸಂಸದ ರಾಘವೇಂದ್ರ, ಕಾಂಗ್ರೆಸ್ ಮುಖಂಡ ನಾಗರಾಜ್ ಗೌಡ ನಡುವೆ ಕಿರಿಕ್, ಮಾತಿನ ಚಕಮಕಿ ವಿಡಿಯೋ ವೈರಲ್
ಸಂಸದ ಬಿ.ವೈ.ರಾಘವೇಂದ್ರ ಹಾಗೂ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಎಸ್.ಪಿ.ನಾಗರಾಜ ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಒಂದು ವಾರದ ಹಳೆಯ ವಿಡಿಯೋ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ವೈರಲ್ ಆಗಿದೆ. ಶಿಕಾರಿಪುರ ಪಟ್ಟಣದ ವಿದ್ಯಾರ್ಥಿ ನಿಲಯ ಉದ್ಘಾಟನಾ ಕಾರ್ಯಕ್ರಮದ ನಂತರ ಉದ್ಘಾಟನಾ ಕಾರ್ಯಕ್ರಮದಲ್ಲಿ ವಂದನಾರ್ಪಣೆ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆ ಮೇಲಿರುವ ನಮ್ಮ ಹೆಸರನ್ನು ಯಾಕೆ ಹೇಳಲಿಲ್ಲ. ಸಂಸದರು ವೇದಿಕೆ ಮೇಲೆ ಹೇಳಿದಂತೆ ಕೇಳುವುದಾದರೆ ಅವರ ಮನೆಗೆ ಹೋಗಿ ಅವರು ಹೇಳಿದಂತೆ ಕೇಳಿ ಎಂದು ನಿರೂಪಣೆ ಮಾಡುತ್ತಿದ್ದ ವಿದ್ಯಾರ್ಥಿ ನಿಲಯ ಮೇಲ್ವಿಚಾರಕ ರಾಮಪ್ಪ ವಿರುದ್ಧ ನಾಗರಾಜ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.