ಶಿರಸಿ: ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ನಡಿಗೆ ಸ್ಪರ್ಧೆಯಲ್ಲಿ ಕೆಳಗಿನ ಓಣಿಕೇರಿಯ ಪುಷ್ಪವತಿಗೆ ಬಂಗಾರದ ಪದಕ
ಶಿರಸಿ: ಶ್ರೀಲಂಕಾದಲ್ಲಿ ನಡೆದ ಶ್ರೀಲಂಕಾ ಮಾಸ್ಟರ್ಸ ಅಥ್ಲಟಿಕ್ ವತಿಯಿಂದ ನಡೆದ ೩೮ನೇ ಅನ್ಯುವಲ್ ಮಾಸ್ಟರ್ ಅಥ್ಲೇಟಿಕ್ ಚ್ಯಾಂಪಿಯನ್ ಶಿಫ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶಿರಸಿ ತಾಲೂಕಿನ ಕೆಳಗಿನ ಓಣಿಕೇರಿಯ ಪುಷ್ಪವತಿ ಎಸ್.ಗೌಡ ಅವರು ನಡಿಗೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಇವರು ಶಿಕ್ಷಣ ಇಲಾಖೆಯ ಭಾರತ್ ಸೇವಾ ದಳದಲ್ಲಿ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು ಈ ಹಿಂದೆ ನಡೆದ ಕರ್ನಾಟಕದ ಮೈಸೂರು ಅಥ್ಲೇಟಿಕ್ ನಲ್ಲಿ ೧೫೦೦ ಮೀಟರ್ ರನ್ನಿಂಗ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.