ಯಲ್ಲಾಪುರ : ರಾಷ್ಟ್ರೀಯ ಹೆದ್ದಾರಿಗೆ ಬಿಳಿ ಬಣ್ಣದ ಪಟ್ಟಿ ಬಳಿಯುವ ವೇಳೆ ಬಾಯ್ಲರ್ ಸ್ಫೋಟವಾದ ಘಟನೆ ತಾಲೂಕಿನ ಆರ್ತಿಬೈಲ್ ಘಟ್ಟದಲ್ಲಿ ನಡೆದಿದೆ. ಹೆದ್ದಾರಿಯಲ್ಲಿನ ಹೊಂಡ ಮುಚ್ಚುವ ದುರಸ್ಥಿ ಕೆಲಸ ಮುಕ್ತಾಯದ ನಂತರ ಹೆದ್ದಾರಿಯ ಉದ್ದಕ್ಕೂ ಬಿಳಿ ಬಣ್ಣದ ಪಟ್ಟಿಗಳನ್ನು ಎಳೆಯಲಾಗುತ್ತಿದೆ.ಈ ಬಣ್ಣ ಬಳಿಯುವದಕ್ಕೆ ಗದಗದ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಅದರ ಪ್ರಕಾರ, ಕಂಪನಿಯ ಸಿಬ್ಬಂದಿ ಗ್ಯಾಸ್ ಸಿಲೆಂಡರ್ ಹಾಗೂ ಬಾಯ್ಲರ್ ಬಳಕೆ ಮಾಡಿ ರಸ್ತೆಗೆ ಬಿಳಿ ಬಣ್ಣದ ಪಟ್ಟಿ ಬಳಿಯುತ್ತಿರುವ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಸಿಲೆಂಡರ್ ಸ್ಫೋಟಿಸಿದೆ. ಅದೇ ವೇಳೆ ಬಾಯ್ಲರ್ ಬಳಿ ಬೆಂಕಿ ತಾಗಿದ್ದು, ಬಿಸಿಯ ತೀವ್ರತೆಗೆ ಬಾಯರ್ ಸ್ಪೋಟವಾಗಿದೆ.