ಚಿತ್ರದುರ್ಗದಲ್ಲಿಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಭೀಮ ಘರ್ಜನೆ ರಾಜ್ಯ ಸೇವಾ ಸಮಿತಿಯ ಲೋಗೋವನ್ನ ಬಿಡುಗಡೆ ಮಾಡಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆಗೆ ಅಂಬೇಡ್ಕರ್ ಅವರ ಪರಿ ನಿರ್ವಾಣ ದಿನದಂದು ಭೀಮ ಘರ್ಜನೆ ರಾಜ್ಯ ಸೇವಾ ಸಮಿತಿಯ ಲೋಗೋವನ್ನ ಬಿಡುಗಡೆ ಮಾಡಿದ್ದು ಸಮಿತಿಯ ಸದಸ್ಯರಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಭೀಮ ಘರ್ಜನೆ ರಾಜ್ಯ ಸೇವಾ ಸಮಿತಿಯು ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಬಡವರ ದೀನ ದಲಿತರ ಸಮಸ್ಯೆಗಳಿಗೆ ಸದಾ ಸ್ಪಂದಿಸುವಂತಾಗಲಿ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ