ರಾಯಚೂರು ತಾಲೂಕಿನ RTPS, YTPS ನಲ್ಲಿ ಕೋಟ್ಯಾಂತರ ರೂಪಾಯಿ ಕಲ್ಲಿದ್ದಲು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಲು ಹಿಂದೇಟು ಅಧಿಕಾರಿಗಳು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. RTPS, YTPS ಗೆ ವಿದ್ಯುತ್ ಉತ್ಪಾದನೆಗೆ ಆಮದು ಮಾಡಿಕೊಳ್ಳುವ ಕಲ್ಲಿದ್ದಲು ರೈಲು ವ್ಯಾಗನ್ ಗಳನ್ನು ಸಮರ್ಪಕ ಖಾಲಿ ಮಾಡದೆ. ಮತ್ತೊಂದು ಸ್ಥಳದಲ್ಲಿ ಅಕ್ರಮವಾಗಿ ಡಂಪ್ ಮಾಡಿ ನಂತರ ಜೆಸಿಬಿ ಗಳಿಂದ ಲಾರಿಗಳಿಗೆ ಕಲ್ಲಿದ್ದಲು ತುಂಬಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳ ಬೆಂಬಲದಿಂದ ಅಕ್ರಮ ನಡೆದಿದೆ ಎಂಬ ಆರೋಪ ಗಂಭೀರವಾಗಿ ಕೇಳಿಬರುತ್ತಿದೆ. ಅಕ್ರಮ ಬಯಲಿಗೆ ಬಂದ ನಂತರ ಪೊಲೀಸ್ ಠಾಣೆಗೆ ಬಂದಿದ್ದ ಅಧಿಕಾರಿಗಳು, ಸಮರ್ಪಕ ದೂರು ನೀಡುವಲ್ಲಿ ವಿಫಲರಾಗಿ