ಕಮಲಾಪುರ: ಅತಿವೃಷ್ಟಿ ಹೊಡೆತ: ಕಮಲಾಪುರದಲ್ಲಿ ಶೇ.80 ತೊಗರಿ ನಾಶ, ಕೇಂದ್ರ ತಂಡದ ಮುಂದೆ ರೈತರ ಅಳಲು
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನಲ್ಲಿ ಆಗಸ್ಟ್, ಸೆಪ್ಟೆಂಬರ್ನಲ್ಲಿ ಸುರಿದ ಅತಿವೃಷ್ಟಿಯಿಂದ ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಆಗಮಿಸಿದ ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ತಂಡದ ಮುಂದೆ ರೈತರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು.. ತೊಗರಿ ಬಿತ್ತಿದರೂ ಬೀಜದ ಹಣ ಕೂಡಾ ವಾಪಸ್ ಬಂದಿಲ್ಲ, ಲಕ್ಷಾಂತರ ರೂ. ಖರ್ಚು ವ್ಯರ್ಥವಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು. ಕಮಲಾಪುರ ತಾಲೂಕಿನಲ್ಲಿ 7,892 ಹೆಕ್ಟೇರ್ ತೊಗರಿ ಬಿತ್ತನೆಗೊಂಡಿದ್ದು, ಶೇ.80ರಷ್ಟು ಬೆಳೆ ಹಾನಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಂಡಕ್ಕೆ ಮಾಹಿತಿ ನೀಡಿದರು. ತಂಡವು ಕಮಲಾಪುರ, ಡೊಂಗರಗಾಂವ್, ಭೀಮನಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆ ಹಾಗೂ ರಸ್ತ