ಕುಮಾರ ಸ್ವಾಮಿ ಅವರು ಸಿದ್ದರಾಮಯ್ಯನವರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ, ಭಾರಿ ಕೈಗಾರಿಕಾ ಸಚಿವರು ನಮ್ಮ ಸಿಎಂ ಬಗ್ಗೆ ಲೀಸ್ ಸಿಎಂ ಎಂದಿದ್ದಾರೆ. ದೇವೇಗೌಡರು ಸಿದ್ದರಾಮಯ್ಯನವರ ಬೆನ್ನಿಗೆ ಚೂರಿ ಹಾಕಿದ್ರು. ಎಷ್ಟು ಅನ್ಯಾಯ ಮಾಡಿದ್ರಿ ಎಂದು ರಾಜ್ಯಕ್ಕೆ ಗೊತ್ತು, ನಿಮಗೂ ಗೊತ್ತು ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಕುಮಾರಕೃಪಾ ಅತಿಥಿ ಗೃಹದಲ್ಲಿ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದರು. ಸಿದ್ದರಾಮಯ್ಯ ಅವರದ್ದು ಬಿಟ್ಟು ಬೇರೆ ಅವರದ್ದಾಗಿದ್ರೆ ಪೊಲಿಟಿಕಲ್ ಕರಿಯರ್ ಎಂಡ್ ಆಗ್ತಿತ್ತು, ಆದರೆ ಸಿದ್ದರಾಮಯ್ಯ ಸಾಹೆಬ್ರು ಹಾಗಲ್ಲ ದೃತಿಗೆಡಲಿಲ್ಲ. ನಿಮ್ಮ ಪಕ್ಷದಲ್ಲಿದ್ದಾಗ ನಿಮಗೆ ನಿಯತ್ತಾಗಿದ್ರು. ಕಾಂಗ್ರೆಸ್ನಲ್ಲಿದ್ದಾಗ ಕಾಂಗ್ರೆಸ್ಗೆ ನಿಯತ್ತಾಗಿದ್ದಾರೆ.