ಹಳಿಯಾಳ : ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಹಳಿಯಾಳ ತಾಲೂಕಿನ ಮುರ್ಕವಾಡ ಕೆರೆಯ ಡ್ರಾಫ್ಟ್ ಚಾನಲ್ ಸುಧಾರಣೆ ಕಾಮಗಾರಿ ಮತ್ತು ಗುತ್ತಿಬೈಲ್ ಕೆರೆ ಏರಿ ಸುಧಾರಣೆ ಕಾಮಗಾರಿ ಹಾಗೂ ಮುರ್ಕವಾಡ ಗ್ರಾಮದ ಪರಿಮಿತಿಯಲ್ಲಿ ಸಿಮೆಂಟ್ ಚರಂಡಿ, ಸಿ.ಡಿ, ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶನಿವಾರ ಸಂಜೆ 4:00 ಸುಮಾರಿಗೆ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ ಅವರು ಭೂಮಿ ಪೂಜೆ ಕೈಗೊಂಡು ಶಂಕು ಸ್ಥಾಪನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಬಿಸಿಸಿ ಅಧ್ಯಕ್ಷರು, ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.