ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಕ್ಕೆ ಗೃಹ ಇಲಾಖೆಯಿಂದ ಅವಕಾಶ ವಿಚಾರಕ್ಕೆ ಸಂಬಂಧಿಸಿ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಜಸ್ಟೀನ್ ಕುನ್ಹಾ ಸಮಿತಿ ಮಾಡಿ ಸ್ಟೇಡಿಯಂ ಪರಿಶೀಲನೆಗೆ ಹೇಳಿದ್ದೆವು. ಅವರು ಹಲವು ಶಿಫಾರಸ್ಸುನ್ನು ಕೊಟ್ಟಿದ್ದರು. ಇದರ ಅನ್ವಯ ಕ್ಯಾಬಿನೆಟ್ ನಲ್ಲಿ ಚರ್ಚೆ ಸಮಿತಿ ರಚನೆ ಮಾಡಿದ್ದೆವು. ನಾವು ಕುನ್ಹಾ ಅವರ ಶಿಫಾರಸ್ಸು ಕೆಎಸ್ ಸಿಎ ಗೆ ಕಳಿಸಿ ಇದನ್ನ ಸರಿಮಾಡಿ ಎಂದಿದ್ದೆವು. ಇದರ ಸ್ಥಿತಿಗತಿ ಅಧ್ಯಯನಕ್ಕೆ ಮಹೇಶ್ವರ್ ರಾವ್ ಸಮಿತಿ ಮಾಡಿದ್ದೆವು. ಅವರು ವರದಿ ಕೊಟ್ಟಿದ್ದರು. ಕೆಎಸ್ ಸಿ ಎ ಹೊಸ ಸಮಿತಿ ನಾವು ಕಂಡಿಷನ್ ಪೂರೈಸುತ್ತೆವೆ ಎಂದಿದ್ದರು.