ಕೃಷ್ಣರಾಜನಗರ: ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಗ್ರಾ.ಪಂಗೆ ಖರ್ಚು ವೆಚ್ಚ ನೀಡಿ: ಚುನಾವಣಾಧಿಕಾರಿಗೆ ಪಟ್ಟಣದಲ್ಲಿ ಪಿಡಿಒಗಳಿಂದ ಮನವಿ
ಕೃಷ್ಣರಾಜನಗರ ಮತಗಟ್ಟೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಗ್ರಾಮ ಪಂಚಾಯಿತಿಗೆ ಚುನಾವಣಾ ಆಯೋಗದಿಂದ ಖರ್ಚು ವೆಚ್ಚ ನೀಡುವಂತೆ ತಾಲ್ಲೂಕು ಪಿಡಿಒಗಳ ಸಂಘದಿಂದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಸಹಾಯಕ ಚುನಾವಣಾಧಿಕಾರಿ ಸುಪ್ರೀತ ಬಣಗಾರ್ಗೆ ದೂರು ನೀಡಿದರು. ಗ್ರಾಮ ಪಂಚಾಯಿತಿಯಿಂದಲೇ ಖರ್ಚು-ವೆಚ್ಚ ಮಾಡಬೇಕೆಂದು ಒತ್ತಡ ಹಾಕಲಾಗುತ್ತಿದೆ. ಆದರೆ, ಯಾವುದೇ ಆದೇಶ ನೀಡಿಲ್ಲ. ಮಾತಿನಲ್ಲಿ ಹೇಳುತ್ತಿರುವುದು ನಮಗೆ ನಿರ್ವಹಿಸಲು ಕಷ್ಟವಾಗುತ್ತಿದೆ. ಕೂಡಲೇ ಇದರ ಬಗ್ಗೆ ಪರಿಶೀಲನೆ ಮಾಡಿ ಮತಗಟ್ಟೆ ಖರ್ಚು ವೆಚ್ಚಕ್ಕೆ ಹಣ ನೀಡುವಂತೆ ಮನವಿ ಮಾಡಿದರು.