ಖ್ಯಾತ ಸ್ತ್ರೀ ರೋಗ ತಜ್ಞೆ ಮತ್ತು ಅವರ ಪುತ್ರ ಅಶ್ವಥನಗರದ ಮನೆಯಲ್ಲಿ ನೇಣು ಬಿಗಿದುಕೊಂಡು ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದರು. ಶನಿವಾರ ಮಧ್ಯಾಹ್ನ 3 ಗಂಟೆಗೆ ಮೃತರ ಮನೆಗೆ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಅಮ್ಮ ಮಗ ಒಂದೇ ದಿನ ಸಾವನಪ್ಪಿರುವುದು ನೋವು ತರಿಸಿದೆ, ಡಾ.ನಾಗರಾಜ್ ಹಾಗೂ ಜಯಶ್ರೀಯವರು ಸಾಮಾಜಿಕ ಕಳಕಳಿ ಹೊಂದಿದವರು, ಈವರೆಗೂ ಅವರ ಮನೆಯಲ್ಲಿ ನಾಲ್ಕು ಸಾವಾಗಿದೆ, ಈ ವಿಷಯ ತುಂಬಾ ನೋವು ತರಿಸಿದೆ, ವೈದ್ಯ ವೃತ್ತಿಯಲ್ಲಿ ಉತ್ತಮ ವಾಗಿ ಜಯಶ್ರೀ ಹೊಮ್ಮರಡಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ರು, ಇದೀಗ ಅಮ್ಮ, ಮಗ ಆತ್ಮಹತ್ಯೆ ಗೆ ಶರಣಾಗಿರೋದು ನಿಜಕ್ಕೂ ದುಃಖದ ಸಂಗತಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.