ಯಲ್ಲಾಪುರ : ಕಣ್ಣಿಗೇರಿ ಬಳಿ ಬೈಕ್ ಅಪಘಾತ, ವೈದ್ಯಕೀಯ ವಿದ್ಯಾರ್ಥಿ ಸಾವು ಯಲ್ಲಾಪುರ : ಯಾಣಕ್ಕೆ ಪ್ರವಾಸಕ್ಕೆ ಹೊರಟಿದ್ದ ಹುಬ್ಬಳ್ಳಿ ಯ ವೈದ್ಯಕೀಯ ಕಾಲೇಜಿನ ಎಂ ಬಿ ಬಿ ಎಸ್ ವಿದ್ಯಾರ್ಥಿಗಳ ಬೈಕು ತಾಲೂಕಿನ ಕಣ್ಣಿಗೇರಿ ಬಳಿ ಅಪಘಾತಕ್ಕೀಡಾಗಿದೆ. ಪರಿಣಾಮ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ ವೈದ್ಯಕೀಯ ಕಾಲೇಜಿನ ನಾಲ್ಕೈದು ವಿದ್ಯಾರ್ಥಿಗಳು ಶನಿವಾರ ಯಾಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಕಣ್ಣಿಗೇರಿ ಗ್ರಾಮದ ಎಚ್ ಕೆ ಜಿ ಎನ್ ಸಿಮೆಂಟ್ ಪಾಕ್ಟರಿ ಬಳಿ ವಿದ್ಯಾರ್ಥಿ ರಾಜೀವ ಚೌದರಿ ಚಲಾಯಿಸುತ್ತಿದ್ದ ಬೈಕು ನಿಯಂತ್ರಣ ತಪ್ಪಿ ಬಿದ್ದು ಬೈಕಿನಲ್ಲಿ ಹಿಂದೆ ಕೂತಿದ್ದ ಯಾದಗಿರಿಯ ವರ್ಧನ ಶೆಟ್ಟಿ (19) ಅವರ ತಲೆ ಹೆದ್ದಾರಿಗೆ ಬಡಿದು ಸಾವನ್ನಪ್ಪಿದ್ದಾರೆ.