ಯಲ್ಲಾಪುರ :ಹೊನ್ನಾವರ ಕರ್ಕಿಯ ಜ್ಞಾನೇಶ್ವರಿ ಪೀಠದ ಹಿರಿಯ ಶ್ರೀಗಳಾದ ಶ್ರೀ ಸಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ . ಅವರು ಸೋಮವಾರ ಪಟ್ಟಣದ ರೈತ ಭವನದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ ಉದ್ಘಾಟಿಸಿಆಶೀರ್ವಚನ ನೀಡಿದರು. ಜ್ಞಾನೇಶ್ವರಿ ಪೀಠದ ಕಿರಿಯ ಶ್ರೀಗಳಾದ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ಅಹಂಕಾರ ಬಿಟ್ಟು ವಿನಯತೆಯನ್ನು ಮೈಗೂಡಿಸಿಕೊಂಡರೆ ಅಂತಹ ವ್ಯಕ್ತಿಯನ್ನು ಪ್ರಪಂಚ ಮತ್ತು ಸಮಾಜ ಗೌರವಿಸುತ್ತದೆ. ಬಾಗಿ ನಡೆದರೆ ಭಾಗ್ಯವಂತನಾಗುತ್ತಾನೆ. ಅಹಂಕಾರದಿಂದ ಬೀಗಿ ನಡೆದರೆ ಭಿಕಾರಿಯಾಗುತ್ತಾನೆ ಎಂದರು.