ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಸಭೆ ಸಂಬಂಧ ಕೆಎಸ್ಸಿಎ ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ್ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ. ಕ್ರೀಡಾಂಗಣದ ಸುರಕ್ಷತೆ ಕ್ರಮಗಳ ಪರಿಶೀಲನೆ ಬಗ್ಗೆ ಪೊಲೀಸರು ಕೆಎಸ್ ಸಿಎ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಗೃಹಮಂತ್ರಿಗಳು ರಚಿಸಿರುವ ಸಮಿತಿ, ಅನುಮತಿ ನೀಡುವ ಮೊದಲು ಸುರಕ್ಷತೆ ಪಾಲನೆ ಬಗ್ಗೆ ಚರ್ಚಿಸಿದೆ. ಸ್ಟೇಡಿಯಂಗೆ ಸಂಬಂಧಪಟ್ಟ ಸಲಹೆಗಳನ್ನು ಪಾಲಿಸುವುದಾಗಿ ವಕ್ತಾರರು ತಿಳಿಸಿದ್ದಾರೆ. ಆರ್ಸಿಬಿ ಫ್ರಾಂಚೈಸಿ ಸಂಪರ್ಕದಲ್ಲಿದ್ದು, ಅನುಮತಿ ಸಿಕ್ಕ ನಂತರ ಪಂದ್ಯಗಳ ಬಗ್ಗೆ ಮಾತನಾಡಲಾಗುವುದು ಎಂದು ಹೇಳಿದ್ದಾರೆ.