ಹಳಿಯಾಳ : ಪಟ್ಟಣದ ಅಂಚಿನಲ್ಲಿರುವ ಹಳಿಯಾಳ -ಯಡೋಗಾ ರಸ್ತೆ ಪಕ್ಕದಲ್ಲಿರುವ ಚೆನ್ನಾಪುರ ಗ್ರಾಮದಲ್ಲಿ 15ಕ್ಕೂ ಹೆಚ್ಚು ಎಕರೆ ಕಬ್ಬು ಬೆಳೆ ಬೆಂಕಿಗಾಹುತಿಯಾಗಿರುವ ಘಟನೆ ಭಾನುವಾರ ಮಧ್ಯಾಹ್ನ 2 ರಿಂದ 2.30 ಗಂಟೆ ಸುಮಾರಿಗೆ ನಡೆದಿರುವ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. 6 ಜನ ರೈತರಿಗೆ ಸೇರಿದ 15ಕ್ಕೂ ಹೆಚ್ಚು ಎಕರೆ ಕಬ್ಬು ಬೆಳೆ ಬೆಂಕಿಗಾಹುತಿಯಾಗಿದ್ದು, ಕನಿಷ್ಠ ವೆಂದರೂ 350 ಟನ್ ಗಳಿಗೂ ಮಿಗಿಲಾದ ಕಬ್ಬು ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗುತ್ತಿದೆ. ರೈತರಾದ ಮಾವಳು ಹನುಮಂತ ಜಾವಳೆಕರ 3ಎಕರೆ, ಸಹದೇವ ಬೋಬಾಟಿ -2 ಎಕರೆ, ತಾನಾಜಿ ಮರಾಠೆ -3ಎಕರೆ, ನಾರಾಯಣ ಅರೆಬೇಡರ-2 ಎಕರೆ, ಗುರುನಾಥ ಡಮ್ಮನಗಿಮಠ-4 ಎಕರೆ, ಮಹೇಶ ತೋರ್ಲೆಕರ 1 ಎಕರೆ ಕಬ್ಬು ಬೆಳೆ ನಾಶವಾಗಿದೆ.