ಶಿರಸಿ: ಅಡಿಕೆ ಸಂಬಂಧಿತ ಕಾನೂನು ಹೋರಾಟದ ಕುರಿತು ನಗರದ ಟಿಎಸ್ಎಸ್ ಪ್ರಧಾನ ಕಚೇರಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸಭೆ
ಶಿರಸಿ: ಅಡಕೆ ಸಂಬಂಧಿತ ಕಾನೂನು ಹೋರಾಟ, ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಎದುರಾಗಬಹುದಾದ ಸವಾಲುಗಳ ಕುರಿತು ಗಹನವಾದ ಚರ್ಚೆ ನಡೆಯಿತು. ಕರ್ನಾಟಕ ರಾಜ್ಯ ಅಡಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ ನಿಯಮಿತ, ಶಿವಮೊಗ್ಗ ವತಿಯಿಂದ ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಪ್ರದಾನ ಕಚೇರಿಯಲ್ಲಿ ಅಡಕೆ ಮಾರ್ಕೆಟಿಂಗ್ ಸಹಕಾರ ಸಂಘಗಳ ಸಭೆಯಲ್ಲಿ ಈ ವಿಚಾರ ಕುರಿತು ಮಾತು ಕತೆ ನಡೆಯಿತು. ಮಹಾಮಂಡಳದ ಅಧ್ಯಕ್ಷ ಅರಗ ಜ್ಞಾನೇಂದ್ರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಡಕೆ ಮಹಾಮಂಡಳದ ಕಾರ್ಯ ಚಟುವಟಿಕೆಗಳು ಮತ್ತು ಈವರೆಗಿನ ಸಾಧನೆಗಳ ಕುರಿತು ಅಧ್ಯಕ್ಷರು ವಿವರವಾಗಿ ಸಭೆಗೆ ತಿಳಿಸಿದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.