ಪಟ್ಟಣದ ಪುರಸಭೆ ವೃತ್ತದಲ್ಲಿ ತಾಲ್ಲೂಕು ಮಾದಿಗ ಸಂಘಟನೆಗಳಿಂದ ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಮಾಡಲಾಯಿತು. ಶಾಸಕ ಡಿ. ರವಿಶಂಕರ್ ಭಾಗವಹಿಸಿ ಜಗಜೀವನ್ ರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಮಹನೀಯರ ಜಯಂತಿ ಆಚರಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಡಾ. ಬಾಬು ಜನಜೀವನ್ ರಾಮ್ ಅವರು ಅಭಿವೃದ್ಧಿ ಹರಿಕಾರರು ಹಾಗಾಗಿ ಅವರ ಸಾಧನೆಯ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು. ಈ ವೇಳೆ ತಾಲ್ಲೂಕು ಮಾದಿಗ ಸಂಘದ ಪದಾಧಿಕಾರಿಗಳು ಇದ್ದರು.