ತೋಡೂರಿನ ಜಾರಗದ್ದೆ ಪ್ರದೇಶಕ್ಕೆ ಗುರುವಾರ ಸಂಜೆ 4.30ರ ವೇಳೆ ಭೇಟಿ ನೀಡಿದ ಪ್ರಗತಿಪರ ದಲಿತ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಎಲಿಷಾ ಎಲಕಪಾಟಿ ತೋಡೂರು ಜಾರಗದ್ದೆಯಲ್ಲಿ ಸರ್ಕಾರವು ಆಗೇರ ಸಮುದಾಯಕ್ಕೆ ನೀಡಿದ ಜಮೀನಿನ ಆರ್ಟಿಸಿ ದಾಖಲೆಯಲ್ಲಿ ಜಮೀನು ಮಾಲೀಕರ ಹೆಸರನ್ನು ಕೂಡಲೇ ಸೇರ್ಪಡೆ ಮಾಡಬೇಕು. ಇಲ್ಲಿನ ಆಗೇರ ಸಮುದಾಯದ ಏಳು ಕುಟುಂಬಗಳ ಜಮೀನು ಇಂದಿಗೂ ಅವರ ಹೆಸರಿಗೆ ದಾಖಲಾಗದಿರಲು ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ ಎಂದು ದೂರಿದ್ದಾರೆ.