ಚಿಕ್ಕಬಳ್ಳಾಪುರ: ಪಾಕಿಸ್ತಾನ ಉಗ್ರರನ್ನು ನಮ್ಮ ಸೈನಿಕರು ಉಡಾಯಿಸುತ್ತಾರೆ: ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್
ನಗರದಲ್ಲಿ ಇಂದು ನಮ್ಮೂರಿಗೆ ನಮ್ಮ ಶಾಸಕರ ನಿಮಿತ್ತಾ ಶಾಸಕ ಪ್ರದೀಪ್ ಈಶ್ವರ್ ಮನೆಮನೆಗೂ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದು ನಂತರ ಮಾತನಾಡಿದ ಶಾಸಕ ಕಳೆದ ದಿನ ಕಾಶ್ಮೀರ ದಲ್ಲಿ ನಡೆದ ಹತ್ಯಾಕಾಂಡ ವಿಚಾರವಾಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಉಗ್ರರ ದಾಳಿಯಿಂದ 27 ಜನ ಸಾವನ್ನಪ್ಪಿದ್ದಾರೆ.ಇದು ಬಹಳಷ್ಟು ಬೇಸರದ ವಿಚಾರ, ಇದರಲ್ಲಿ ರಾಜಕೀಯವಾಗಿ ಯಾರನ್ನು ಬಯ್ಯೂವುದು,ಹೊಗುಳುವುದು ಬೇಡ, ನನಗೆ ಇಂಡಿಯನ್ ಆರ್ಮಿ ಮೇಲೆ ನಂಬಿಕೆ ಇದೆ. ಆ ಕೃತ್ಯಕ್ಕೆ ಯಾರು ಕಾರಣವಾಗಿದ್ದಾರೆ ಅವರನ್ನು ಇಂಡಿಯನ್ ಆರ್ಮಿ ಉಡಾಯಿಸುತ್ತಾರೆ. ಅವನು ಯಾವನ್ ಬಂದು ಕೃತ್ಯ ಮಾಡಿದ್ದಾನೋ ಅವನ್ನನ್ನು ಶೂಟ್ ಮಾಡುತ್ತೆ ಅವರ ತಲೆಗೆ ಪಾಯಿಂಟ್ ಬ್ಲಾಕ್ ನಲ್ಲಿ ಬುಲೆಟ್ ಇಟ್ಟು ಉಡಾಯಿಸುತ್ತಾರೆ ಎಂದು ಹೇಳಿದರು.