ಕೃಷ್ಣರಾಜನಗರ: ಪಟ್ಟಣದ ಯಡತೊರೆ ಶ್ರೀ ಯೋಗಾ ನಂದೇಶ್ವರ ಸರಸ್ವತಿ ಮಠಕ್ಕೆ ಶೃಂಗೇರಿಯ ಭಾರತಿ ತೀರ್ಥ ಸ್ವಾಮೀಜಿ ಭೇಟಿ
ಪಟ್ಟಣದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠಕ್ಕೆ ಶೃಂಗೇರಿ ಮಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಹಾಗೂ ಜಗದ್ಗುರು ಶ್ರೀ ವಿಧುಶೇಖರ ಸ್ವಾಮೀಜಿಗಳು ಭಾನುವಾರ ಭೇಟಿ ನೀಡಿ ಸಾವಿರಾರು ಭಕ್ತರಿಗೆ ಆಶೀರ್ವಚನ ನೀಡಿದರು. ಈ ವೇಳೆ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮೀಜಿಗಳ ದರ್ಶನ ಪಡೆದರು. ಇನ್ನು ಈ ಸಂದರ್ಭದಲ್ಲಿ ಶಾಸಕ ಡಿ. ರವಿಶಂಕರ್ ಸಹ ಮಠಕ್ಕೆ ಭೇಟಿ ನೀಡಿ ತಾಂಬೂಲ ನೀಡುವ ಮೂಲಕ ಸ್ವಾಮೀಜಿಗಳನ್ನು ಗೌರವಿಸಿ ಆಶೀರ್ವಾದ ಪಡೆದುಕೊಂಡರು.