ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಸಲಾಯ್ತು. ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಮಾತನಾಡಿದ ಅವರು ನೊಣಂಬ ಸಮಾಜ & ವೀರಶೈವ ಸಮಾಜಗಳು ಸಮಾಜವನ್ನ ಕಟ್ಟುವ ಕೆಲಸ ಮಾಡಿದ್ದಾರೆ. ಆದರೆ ಕೆಲ ರಾಜಕಾರಣಿ ಶಕ್ತಿಗಳು, ತಮ್ಮ ಬೇಳೆ ಬೇಯಿಸಿಕೊಳ್ಳಲು ವೀರಶೈವ ಲಿಂಗಾಯತ ಸಮಾಜ ಹೊಡೆಯುವ ಕೆಲಸ ಮಾಡಿದ್ದು, ಇಂಥ ಕರಾಳ ಇತಿಹಾಸವನ್ನ ನಮ್ಮ ಸಮಾಜ ಎಂದಿಗೂ ಮರೆಯಬಾರ್ದು ಎಂದರು. ಅಲ್ಲದೆ ಸಮಾಜ ಹೊಡೆಯುವ ಮೂಲಕ ನಮ್ಮಲ್ಲೇ ಗೊಂದಲ ಮೂಡಿಸುವ ಷಡ್ಯಂತ್ರ, ಕುತಂತ್ರ ನಡೆಯುತ್ತಿದೆ. ದುಷ್ಟ ಶಕ್ತಿಗಳು ಏನೇ ಪ್ರಯತ್ನ ಮಾಡಿದರು ನಮ್ಮ ಸಮಾಜ ಹೊಡೆಯಲು ಸಾಧ್ಯವಿಲ್ಲ ಎಂದು ಎಂದರು