ಯಲ್ಲಾಪುರ ತಾಲ್ಲೂಕಿಗೆ ಸುತ್ತಮುತ್ತಲಿನ ದೂರದ ಹಳ್ಳಿಗಳಿಂದ ಬುಡಕಟ್ಟು ಮತ್ತು ಹಿಂದುಳಿದವರ್ಗದ ವಿದ್ಯಾರ್ಥಿಗಳು ಪ್ರತಿನಿತ್ಯ ಕಾಲೇಜುಗಳಿಗೆ ಬರುತ್ತಿದ್ದು ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹಿಗಾಗಿ ಯಲ್ಲಾಪುರದಲ್ಲಿ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯ ಪ್ರಾರಂಭಿಸುವ ಯೋಚನೆ ಸರ್ಕಾರಕ್ಕೆ ಇದೆಯೆ? ಎಂದು ವಿಧಾನ ಪರಿಷತ ಸದಸ್ಯರಾದ ಶಾಂತಾರಾಮ ಸಿದ್ದಿಯವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಮುಂಬರುವ ಬಜೇಟನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸುವ ಕುರಿತು ಘೋಷಣೆ ಮಾಡಿ ವಸತಿ ನಿಲಯ ಪ್ರಾರಂಭಿಸುತ್ತೆವೆಂದು ಭರವಸೆ ನೀಡಿರುತ್ತಾರೆ ಎಂದು ಎಂ ಎಲ್ ಸಿ ಕಾರ್ಯಾಲಯದಿಂದ ತಿಳಿಸಿದ್ದಾರೆ.