ಹುಬ್ಬಳ್ಳಿ: ಅಮಾಯಕರನ್ನೇ ಟಾರ್ಗೆಟ್ ಮಾಡಿ ಅಕ್ರಮ ಮೀಟರ್ ಬಡ್ಡಿ ದಂಧೆ, ಜೊತೆಗೆ ಇಸ್ಪೀಟ್ ಆಡಿಸ್ತಿದ್ದ ಇಬ್ಬರ ಮೇಲೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹುಬ್ಬಳ್ಳಿಯ ಗೋಪನಕೊಪ್ಪದ ಸಿದ್ದರಾಮ ನಗರದ ಅಕ್ಷಯ ಕಲ್ಲೊಳ್ಳಿ ಅಲಿಯಾಸ ವಡ್ಡರ್, ಮತ್ತು ಸಚ್ಚಿದಾನಂದ ಉಣಕಲ್ ಅಲಿಯಾಸ ಬಾಬು, ಈ ಇಬ್ಬರು ಅಕ್ರಮ ಬಡ್ಡಿ ವ್ಯವಹಾರ ಮಾಡುತ್ತಾ, ಇಸ್ಪೀಟ್ ಅಡ್ಡೆ ಮಾಡಿ ಜೂಜು ಆಡಿಸುತ್ತಿದ್ದಾರೆ.ಗೋಪನಕೊಪ್ಪ ಮತ್ತು ಉಣಕಲ್ ಹೊರಹೊಲಯದ ಹೊಲಗಳಲ್ಲಿ, 15 ರಿಂದ 20 ಮಂದಿ ಕೂಡಿಸಿ ಇಸ್ಪೀಟ್ ದಂಧೆ ಮಾಡಿಸ್ತಿದ್ದಾರೆ. ಸ್ಥಳದಲ್ಲೇ ಬಡ್ಡಿಗೆ ಹಣ ಕೊಟ್ಟು ಇಸ್ಪೀಟು ಆಡಿಸುತ್ತಾರೆ. ದಿನಕ್ಕೆ 10% ಚಕ್ರ ಬಡ್ಡಿ ದಂಧೆ ಮಾಡ್ತಿದ್ದಾರೆ. ಇವರ ಬಡ್ಡಿ ದಂಧೆಗೆ ತಿಪ್ಪಣ್ಣ ಮಲಗಾವಿ ಎಂಬುವವರು ಹಿಂಸೆಯಿಂದ ಬಳಲುತ್ತ