ಕೃಷ್ಣರಾಜನಗರ: ಪಟ್ಟಣದಲ್ಲಿ ಮತದಾನ ಜಾಗೃತಿಗೆ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ ಚಾಲನೆ
ಪಟ್ಟಣದಲ್ಲಿ ಪುರಸಭೆ ವತಿಯಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಮಂಗಳವಾರ ನಡೆದಿದ್ದು, ಕಾರ್ಯಕ್ರಮಕ್ಕೆ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಕುಮಾರ್ ಡೊಳ್ಳೆ ಚಾಲನೆ ನೀಡಿದರು. ಪಟ್ಟಣದ ಚಂದ್ರ ಮೌಳ್ಯ ರಸ್ತೆ, ಆಂಜನೇಯ ಬ್ಲಾಕ್ ಬಜಾರ್ ರಸ್ತೆ, ವಿವಿ ರಸ್ತೆ, ಗರಡಗಂಭ ವೃತ್ತ, ಹಾಸನ-ಮೈಸೂರು ರಾಜ್ಯ ಹೆದ್ದಾರಿ ಸೇರಿ ವಿವಿಧ ರಸ್ತೆಗಳಲ್ಲಿ ಮತದಾನ ಜಾಗೃತಿ ಜಾಥಾ ನಡೆಸಿದರು.