ಶಿಕ್ಷಣ ಕ್ಷೇತ್ರಕ್ಕೆ ವಿಜಯಸಿಂಗ್ ಮಹತ್ವದ ಕೊಡುಗೆ ಬಸವಕಲ್ಯಾಣ ಕ್ಷೇತ್ರಕ್ಕೆ 7 ಕರ್ನಾಟಕ ಪಬ್ಲಿಕ ಶಾಲೆ ಮಂಜೂರಿ ಮಾಡಿದ ರಾಜ್ಯ ಸರ್ಕಾರ ಬಸವಕಲ್ಯಾಣ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ದೃಷ್ಠಿಯಿಂದ ತಾಲೂಕಿನ 7 ಗ್ರಾಮಗಳಲ್ಲಿ ಹೋಸದಾಗಿ ಕರ್ನಾಟ ಪಬ್ಲಿಕ್ ಶಾಲೆ ಮಂಜೂರಿ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಬಂಪರ್ ಕೋಡುಗೆ ನೀಡಿದೆ. ತಾಲೂಕಿನ ಎಕಲೂರ, ಕೋಹಿನೂರ, ಆಲಗೂಡ, ಉಜಳಂಬ, ದೇವನಾಳ, ನಾರಾಯಣಪೂರ ಹಾಗೂ ಘೋಟಾಳ ಗ್ರಾಮಕ್ಕೆ ಸರ್ಕಾರ ನೂತನವಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಿ ಮಾಡಿದೆ. ಇಲ್ಲಿ ಎಲ್ಕೆಜಿಯಿಂದ ಪಿಯುಸಿ ವರೆಗೆ ಶಿಕ್ಷಣ ಸಿಗಲಿದ್ದು, ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲು