Public App Logo
Profile Picture

Yadgir News 7353702080

@mdrafiq790
19Followers
1Following
ತಾಯಿಯ ಪ್ರೀತಿಯ ಮುಂದೆ ಅಧಿಕಾರವೂ ಚಿಕ್ಕದು: ಸಚಿವನಾದ ಮಗನಿಗೆ ಮುತ್ತಿಟ್ಟು ಆಶೀರ್ವದಿಸಿದ ತಾಯಿ

ಬೆಂಗಳೂರು :, ಆ.3: ಜಗತ್ತಿನಲ್ಲಿ ತಾಯಿಯ ಪ್ರೀತಿಗಿಂತ ಶ್ರೇಷ್ಠವಾದ ಸಂಪತ್ತು ಮತ್ತೊಂದಿಲ್ಲ ಎಂಬುದನ್ನು ಮನದಟ್ಟುಗೊಳಿಸುವ ಭಾವನಾತ್ಮಕ ಕ್ಷಣ ಸಚಿವರ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಕಂಡುಬಂದಿತು.

ಇತ್ತೀಚೆಗೆ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಮಗನನ್ನು ಕಂಡ ತಾಯಿ ಭಾವುಕರಾಗಿ, ಆತನನ್ನು ಆತ್ಮೀಯವಾಗಿ ಅಪ್ಪಿಕೊಂಡು ಕೆನ್ನೆಗೆ ಮುತ್ತಿಟ್ಟು ಆಶೀರ್ವದಿಸಿದರು. ಈ ಅಪರೂಪದ ದೃಶ್ಯ ನೆರೆದಿದ್ದವರ ಮನಸೂರೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಮಗ ಎಷ್ಟೇ ಉನ್ನತ ಹುದ್ದೆಗೆ ಏರಿದರೂ ತಾಯಿಯ ಕಣ್ಣಿಗೆ ಆತ ಎಂದಿಗೂ ಮುದ್ದಿನ ಮಗನೇ ಎಂಬುದನ್ನು ಈ ಕ್ಷಣ ಮತ್ತೊಮ್ಮೆ ಸಾಬೀತುಪಡಿಸಿತು. ಮಗನ ಸಾಧನೆಗೆ ಹೆಮ್ಮೆಗೊಂಡ ತಾಯಿ, ಅವನ ಮುಂದಿನ ಜನಸೇವೆಯ ಪಯಣ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ಭಾವನಾತ್ಮಕ ದೃಶ್ಯವನ್ನು ಕಂಡ ಅಭಿಮಾನಿಗಳು ಹಾಗೂ ಬೆಂಬಲಿಗರು ತಾಯಿ-ಮಗನ ನಡುವಿನ ಪ್ರೀತಿಯ ಬಾಂಧವ್ಯವನ್ನು ಕೊಂಡಾಡಿದರು. ಅಧಿಕಾರ, ಸ್ಥಾನಮಾನ ಮತ್ತು ವೈಭವಕ್ಕಿಂತ ತಾಯಿಯ ಆಶೀರ್ವಾದವೇ ಜೀವನದ ಅತಿದೊಡ್ಡ ಶಕ್ತಿ ಎಂಬ ಸಂದೇಶವನ್ನು ಈ ಘಟನೆ ಸಾರಿತು.

“ಸ್ಥಾನಮಾನಗಳು ತಾತ್ಕಾಲಿಕ; ತಾಯಿಯ ಮಮತೆ ಮತ್ತು ಆಶೀರ್ವಾದ ಮಾತ್ರ ಶಾಶ್ವತ. ಜನಸೇವೆಯ ಹಾದಿಯಲ್ಲಿ ತಾಯಿಯ ಆಶೀರ್ವಾದವೇ ಮಗನಿಗೆ ಅತಿದೊಡ್ಡ ಬಲ.”
B Z Zameer Ahmed Khan Fan Club <nis:link nis:type=tag nis:id=bzzameerahmedkhan nis:value=BzZameerAhmedkhan nis:enabled=true nis:link/> 
<nis:link nis:type=tag nis:id=motherlove nis:value=MotherLove nis:enabled=true nis:link/> <nis:link nis:type=tag nis:id=ತಾಯಿಪ್ರೀತಿ nis:value=ತಾಯಿಪ್ರೀತಿ nis:enabled=true nis:link/> <nis:link nis:type=tag nis:id=motherblessings nis:value=MotherBlessings nis:enabled=true nis:link/> <nis:link nis:type=tag nis:id=ಸಚಿವ nis:value=ಸಚಿವ nis:enabled=true nis:link/> <nis:link nis:type=tag nis:id=karnatakacabinet nis:value=KarnatakaCabinet nis:enabled=true nis:link/> <nis:link nis:type=tag nis:id=karnatakapolitics nis:value=KarnatakaPolitics nis:enabled=true nis:link/> <nis:link nis:type=tag nis:id=ಜನಸೇವೆ nis:value=ಜನಸೇವೆ nis:enabled=true nis:link/> <nis:link nis:type=tag nis:id=ತಾಯಿಯಆಶೀರ್ವಾದ nis:value=ತಾಯಿಯಆಶೀರ್ವಾದ nis:enabled=true nis:link/> <nis:link nis:type=tag nis:id=emotionalmoment nis:value=EmotionalMoment nis:enabled=true nis:link/> <nis:link nis:type=tag nis:id=viralnews nis:value=ViralNews nis:enabled=true nis:link/> <nis:link nis:type=tag nis:id=kannadanews nis:value=KannadaNews nis:enabled=true nis:link/> <nis:link nis:type=tag nis:id=karnatakanews nis:value=KarnatakaNews nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=ಯಾದಗೀರ್‌ನ್ಯೂಸ್ nis:value=ಯಾದಗೀರ್‌ನ್ಯೂಸ್ nis:enabled=true nis:link/> <nis:link nis:type=tag nis:id=yadgirheadlines nis:value=YadgirHeadlines nis:enabled=true nis:link/>
BIG BREAKING NEWS || ಗುರುಶಿಣಗಿ  ಬ್ಯಾರೇಜ್‌ನಿಂದ ನೀರಿನ ಹೊರಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ಯಾದಗಿರಿ, ಆ.3: ಯಾದಗಿರಿ ಬ್ಯಾರೇಜ್‌ಗೆ ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್‌ನ ಒಟ್ಟು 20 ಗೇಟ್‌ಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ.

ಈ ಹಿಂದೆ ಸುಮಾರು 80 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಇದೀಗ ಅದನ್ನು ಒಂದು ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಿರುವುದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಯಾರೂ ಸಹ ನದಿಗೆ ಇಳಿಯುವುದು, ಸೇತುವೆಗಳ ಮೇಲೆ ಅನಗತ್ಯವಾಗಿ ನಿಲ್ಲುವುದು ಅಥವಾ ನದಿ ತೀರದಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮಕ್ಕಳನ್ನು ನದಿ ಸಮೀಪಕ್ಕೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಲಾಗಿದೆ.

<nis:link nis:type=tag nis:id=bigbreakingnews nis:value=BIGBREAKINGNEWS nis:enabled=true nis:link/> <nis:link nis:type=tag nis:id=ಯಾದಗಿರಿ nis:value=ಯಾದಗಿರಿ nis:enabled=true nis:link/> <nis:link nis:type=tag nis:id=ಗುರುಶಿಣಗಿಬ್ಯಾರೇಜ್ nis:value=ಗುರುಶಿಣಗಿಬ್ಯಾರೇಜ್ nis:enabled=true nis:link/> <nis:link nis:type=tag nis:id=ಯಾದಗಿರಿಬ್ಯಾರೇಜ್ nis:value=ಯಾದಗಿರಿಬ್ಯಾರೇಜ್ nis:enabled=true nis:link/> <nis:link nis:type=tag nis:id=ನೀರುಬಿಡುಗಡೆ nis:value=ನೀರುಬಿಡುಗಡೆ nis:enabled=true nis:link/> <nis:link nis:type=tag nis:id=ಒಂದುಲಕ್ಷಕ್ಯೂಸೆಕ್ nis:value=ಒಂದುಲಕ್ಷಕ್ಯೂಸೆಕ್ nis:enabled=true nis:link/> <nis:link nis:type=tag nis:id=ಭೀಮಾನದಿ nis:value=ಭೀಮಾನದಿ nis:enabled=true nis:link/> <nis:link nis:type=tag nis:id=ನೆರೆಎಚ್ಚರಿಕೆ nis:value=ನೆರೆಎಚ್ಚರಿಕೆ nis:enabled=true nis:link/> <nis:link nis:type=tag nis:id=floodalert nis:value=FloodAlert nis:enabled=true nis:link/> <nis:link nis:type=tag nis:id=waterrelease nis:value=WaterRelease nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=karnatakanews nis:value=KarnatakaNews nis:enabled=true nis:link/> <nis:link nis:type=tag nis:id=riveralert nis:value=RiverAlert nis:enabled=true nis:link/> <nis:link nis:type=tag nis:id=publicsafety nis:value=PublicSafety nis:enabled=true nis:link/> <nis:link nis:type=tag nis:id=breakingnews nis:value=BreakingNews nis:enabled=true nis:link/> <nis:link nis:type=tag nis:id=yadgirbreakingnews nis:value=YadgirBreakingNews nis:enabled=true nis:link/> <nis:link nis:type=tag nis:id=yadgirheadlines nis:value=YadgirHeadlines nis:enabled=true nis:link/> <nis:link nis:type=tag nis:id=kannadanews nis:value=KannadaNews nis:enabled=true nis:link/> <nis:link nis:type=tag nis:id=staysafe nis:value=StaySafe nis:enabled=true nis:link/> <nis:link nis:type=tag nis:id=monsoonupdates nis:value=MonsoonUpdates nis:enabled=true nis:link/>
ಇದು ಏನು? ಕಾಮೆಂಟ್ ಮಾಡಿ
ಸ್ಪೈಸ್ ಗಾರ್ಡನ್ ಬಸ್ ನಿಲ್ದಾಣದಲ್ಲಿ ವಾಹನ ಕೆಟ್ಟು ನಿಂತ ಹಿನ್ನೆಲೆ: ಮಾರತಹಳ್ಳಿ ಕಡೆ ಸಂಚಾರ ನಿಧಾನ

ಬೆಂಗಳೂರು, ಆ.3: ಸ್ಪೈಸ್ ಗಾರ್ಡನ್ ಬಸ್ ನಿಲ್ದಾಣದ ಸಮೀಪ ವಾಹನವೊಂದು ಕೆಟ್ಟು ನಿಂತಿರುವ ಹಿನ್ನೆಲೆಯಲ್ಲಿ ಮಾರತಹಳ್ಳಿ ಬ್ರಿಡ್ಜ್ ಕಡೆಗೆ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.

ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ತಾಳ್ಮೆಯಿಂದ ವಾಹನ ಚಲಾಯಿಸುವಂತೆ ಹಾಗೂ ಸಾಧ್ಯವಾದರೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.

ವಾಹನ ತೆರವು ಕಾರ್ಯ ನಡೆಯುತ್ತಿದ್ದು, ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಿ ಪೊಲೀಸ್ ಸಿಬ್ಬಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
Video 4
BIG BREAKING NEWS || ಗುರುಶಿಣಗಿ  ಬ್ಯಾರೇಜ್‌ನಿಂದ ನೀರಿನ ಹೊರಹರಿವು ಹೆಚ್ಚಳ: ನದಿ ಪಾತ್ರದ ಜನರಿಗೆ ಎಚ್ಚರಿಕೆ

ಯಾದಗಿರಿ, ಆ.3: ಯಾದಗಿರಿ ಬ್ಯಾರೇಜ್‌ಗೆ ಒಳಹರಿವು ಗಣನೀಯವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರೇಜ್‌ನ ಒಟ್ಟು 20 ಗೇಟ್‌ಗಳ ಮೂಲಕ ನೀರನ್ನು ಹೊರಹರಿಸಲಾಗುತ್ತಿದೆ.

ಈ ಹಿಂದೆ ಸುಮಾರು 80 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದ್ದು, ಇದೀಗ ಅದನ್ನು ಒಂದು ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಹೆಚ್ಚಿರುವುದರಿಂದ ರೈತರು, ಸಾರ್ವಜನಿಕರು ಹಾಗೂ ನದಿ ಪಾತ್ರದ ಗ್ರಾಮಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಯಾರೂ ಸಹ ನದಿಗೆ ಇಳಿಯುವುದು, ಸೇತುವೆಗಳ ಮೇಲೆ ಅನಗತ್ಯವಾಗಿ ನಿಲ್ಲುವುದು ಅಥವಾ ನದಿ ತೀರದಲ್ಲಿ ಸಂಚರಿಸುವುದನ್ನು ತಪ್ಪಿಸಿ, ಮಕ್ಕಳನ್ನು ನದಿ ಸಮೀಪಕ್ಕೆ ಬಿಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನದಿ ಪಾತ್ರದ ಜನರು ಅಧಿಕಾರಿಗಳ ಸೂಚನೆಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಲಾಗಿದೆ.
ಎಲ್ಲಾ ಸಾರ್ವಜನಿಕರು ಆದಷ್ಟೂ ಭೇಗನೇ ಎಸ್‌ಐಆರ್ ಅರ್ಜಿಗಳನ್ನು ಭರ್ತಿ ಮಾಡಿ ನೀಡಿ : ಶಾಸಕ ತುನ್ನೂರ

ಯಾದಗಿರಿ : ಈಗಾಗಲೇ ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣಾ ಆಯೋಗದ ವಿಶೇಷ ಮತದಾರರ ಪರಿಸ್ಕರಣೆ ಪ್ರಕ್ರೀಯೆ ನಡೆಯುತ್ತಿದು, ಕಾರಣ ಜನರು ನಿಗಧಿತ ಅವಧಿಯೊಳಗೆ ತಮ್ಮ ಮಾಹಿತಿಗಳನ್ನು ಒಳಗೊಂಡ ಅರ್ಜಿಗಳನ್ನು ಆದಷ್ಟೂ ಭೇಗನೇ ಭರ್ತಿ ಮಾಡಿ ನಿಗಧಿತ ಅವಧಿಯೊಳಗೆ ಅಧಿಕಾರಿಗಳಿಗೆ ನೀಡಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮನವಿ ಮಾಡಿದರು.
ನಗರದ ತಮ್ಮ ನಿವಾಸದಲ್ಲಿ ತಮ್ಮ ಮತದಾರರ ಪರಿಸ್ಕರಣೆಯ ಅರ್ಜಿಯನ್ನು ಭರ್ತಿಮಾಡಿ, ಅಧಿಕಾರಿಗಳಿಗೆ ನೀಡಿ, ಮಾತನಾಡಿದ ಅವರು, ಜನರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಚುನಾವಣಾ ಸಿಬ್ಬಂಧಿಗಳು ನೀಡಿರುವ ಅರ್ಜಿಗಳನ್ನು ಸರಿಯಾಗಿ ಭರ್ತಿಮಾಡಿ, ಸಕಾಲಕ್ಕೆ ನೀಡಿದಲ್ಲಿ ನಿಮಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಇಂದಿನ ದರ
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ನನ್ನ ಸಹೋದ್ಯೋಗಿ ಮಿತ್ರರಿಗೆ, ಹಾಗೆಯೇ ವಿಧಾನಸಭಾ ಸಭಾಧ್ಯಕ್ಷರಾಗಿ ಹಾಗೂ ಉಪಸಭಾಧ್ಯಕ್ಷರಾಗಿ, ವಿಧಾನಪರಿಷತ್ ಸಭಾಪತಿಯಾಗಿ ಹಾಗೂ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಎಲ್ಲಾ ನಾಯಕರಿಗೆ ಹಾರ್ದಿಕ ಶುಭಾಶಯಗಳು.

ನಿಮ್ಮೆಲ್ಲರ ಅಪಾರ ರಾಜಕೀಯ ಅನುಭವ ಹಾಗೂ ಬದ್ಧತೆ ನಮ್ಮ ಸರ್ಕಾರದ ಆಡಳಿತ ಯಂತ್ರಕ್ಕೆ ಇನ್ನಷ್ಟು ಚುರುಕು ಮತ್ತು ಶಕ್ತಿ ತುಂಬಲಿದೆ ಎಂಬ ವಿಶ್ವಾಸ ನನಗಿದೆ. ಪಾರದರ್ಶಕ, ದಕ್ಷ ಹಾಗೂ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ಜನರ ಆಶೋತ್ತರಗಳಿಗೆ ನಾವು ಸ್ಪಂದಿಸಬೇಕಿದೆ. ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ನಾವೆಲ್ಲರೂ ಒಟ್ಟಾಗಿ ನಿಭಾಯಿಸೋಣ.

ಸುಭದ್ರ, ಜನಪರ ಹಾಗೂ ಪ್ರಗತಿಪರ ಆಡಳಿತದೊಂದಿಗೆ ಕರುನಾಡನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸೋಣ. ಬಲಿಷ್ಠ ಕರ್ನಾಟಕಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡೋಣ.

-ಮುಖ್ಯಮಂತ್ರಿಗಳು DK Shivakumar
ಮಳೆಗಾಲದ ಸ್ಪರ್ಶ: ಕಣ್ಣುಮನ ಸೆಳೆಯುತ್ತಿರುವ ನಿಸರ್ಗದ ಹಸಿರು ಸೌಂದರ್ಯ

​ವಿಶೇಷ ವರದಿ:

ಇತ್ತೀಚೆಗೆ ಸುರಿದ ಸಾಲು ಸಾಲು ಮಳೆಯಿಂದಾಗಿ ಸುತ್ತಮುತ್ತಲಿನ ಗುಡ್ಡ-ಬೆಟ್ಟಗಳು ಮೈತುಂಬಾ ಹಸಿರನ್ನು ಹೊದ್ದು ಕಂಗೊಳಿಸುತ್ತಿವೆ. ದಿನನಿತ್ಯದ ಜಂಜಾಟದಿಂದ ಕೊಂಚ ಬಿಡುವು ಮಾಡಿಕೊಂಡು ಪ್ರಯಾಣಿಸುವ ಸಾರ್ವಜನಿಕರಿಗೆ ಹಾಗೂ ಪ್ರಕೃತಿ ಪ್ರಿಯರಿಗೆ ಈ ದೃಶ್ಯಾವಳಿಗಳು ಅತೀವ ಆನಂದ ನೀಡುತ್ತಿವೆ.

​ಮಳೆಯ ತಂಪಾದ ವಾತಾವರಣದಿಂದಾಗಿ ಒಣಗಿದ್ದ ಗಿಡ-ಮರಗಳೆಲ್ಲವೂ ಚಿಗುರೊಡೆದು ಇಡೀ ಪರಿಸರವೇ ಹಸಿರುಮಯವಾಗಿದೆ. ಆಕಾಶದಲ್ಲಿ ಕವಿದಿರುವ ತಂಪಾದ ಮೋಡಗಳು, ಸಾಲು ಸಾಲು ಬೆಟ್ಟಗಳು, ಬಂಡೆಕಲ್ಲುಗಳ ನಡುವೆ ನಗುತಿರುವ ಹಸಿರು ಹೊಲಗಳು ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
​
​ಕಣ್ಣುಮನ ಸೆಳೆಯುವ ಹಸಿರು: ಮಳೆಯ ಆಗಮನದಿಂದ ಗುಡ್ಡಗಾಡು ಪ್ರದೇಶಗಳು ನವಚೈತನ್ಯ ಪಡೆದುಕೊಂಡಿದ್ದು, ಪ್ರಕೃತಿಯ ಮಡಿಲು ಸೌಂದರ್ಯದ ಗನಿಯಾಗಿದೆ.
​ಆಹ್ಲಾದಕರ ವಾತಾವರಣ: ಮೋಡಕವಿದ ಆಕಾಶ ಮತ್ತು ತಂಪಾದ ಗಾಳಿ ಸುತ್ತಮುತ್ತಲಿನ ಪರಿಸರಕ್ಕೆ ಶಾಂತಮಯ ಕಳೆಯನ್ನು ತಂದಿತ್ತಿದೆ.
​ಪ್ರಯಾಣಿಕರಿಗೆ ಮುದ: ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರಕೃತಿಯ ಈ ಸೌಂದರ್ಯವನ್ನು ಕಣ್ಣುಂಬಿಕೊಂಡು ಆನಂದಿಸುತ್ತಿದ್ದಾರೆ.
ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಕರ್ನಾಟಕ ಸಚಿವ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಬೆಂಗಳೂರು: ಚಾಮರಾಜಪೇಟೆ ಶಾಸಕ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಕರ್ನಾಟಕ ಸರ್ಕಾರದ ನೂತನ ಸಚಿವರಾಗಿ ಇಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸ್ಥಾನ ಪಡೆದಿದ್ದಾರೆ.

<nis:link nis:type=tag nis:id=bzzameerahmedkhan nis:value=BZZameerAhmedKhan nis:enabled=true nis:link/> <nis:link nis:type=tag nis:id=ಕರ್ನಾಟಕ nis:value=ಕರ್ನಾಟಕ nis:enabled=true nis:link/> <nis:link nis:type=tag nis:id=ಸಚಿವಸಂಪುಟ nis:value=ಸಚಿವಸಂಪುಟ nis:enabled=true nis:link/> <nis:link nis:type=tag nis:id=ಮಂತ್ರಿ nis:value=ಮಂತ್ರಿ nis:enabled=true nis:link/> <nis:link nis:type=tag nis:id=yadgirheadlines nis:value=YadgirHeadlines nis:enabled=true nis:link/>
ಕಳೆದುಹೋದ ಮೊಬೈಲ್ ಗಳನ್ನ CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ, ವಾರಸುದಾರರಿಗೆ ಕಡೂರು ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಲಾಯಿತು. 📱🙌
ನಿಮ್ಮ ಮೊಬೈಲ್ ಕಳೆದುಹೋದರೆ ಆತಂಕ ಬೇಡ, ಈ ಕ್ರಮಗಳನ್ನು ಪಾಲಿಸಿ:
1️⃣ KSP App ಮೂಲಕ ದೂರು ನೀಡಿ.
2️⃣ http://ceir.gov.in ಪೋರ್ಟಲ್‌ನಲ್ಲಿ ವಿವರ ದಾಖಲಿಸಿ.
3️⃣ ನಿಮ್ಮ ಫೋನ್ ಬ್ಲಾಕ್ ಮಾಡಿ, ದುರುಪಯೋಗ ತಡೆಯಿರಿ.

Lost mobile phones tracked down through the CEIR portal and handed over to its rightful owner at the Kadur Police Station. 📱🙌
Don't panic if you lose your mobile phone, just follow these steps:
1️⃣ File a complaint through the KSP App.
2️⃣ Register the details on the http://ceir.gov.in portal.
3️⃣ Block your phone to prevent misuse.

<nis:link nis:type=tag nis:id=ceirportal nis:value=CEIRportal nis:enabled=true nis:link/> <nis:link nis:type=tag nis:id=mobilerecovery nis:value=MobileRecovery nis:enabled=true nis:link/>
*ಅಗಸ್ಟ್ 03 ವರೆಗೆ ಶೇ.82.33 ಗಣತಿ ನಮೂನೆಗಳ ಗಣಕೀಕರಣ*

*ಧಾರವಾಡ (ಕರ್ನಾಟಕ ವಾರ್ತೆ) ಅ.03:* ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, 16,21,961 ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಅಗಸ್ಟ್ 03 2026 ವರೆಗೆ ಒಟ್ಟು 13,35,368 ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ. ಶೇ. 82.33 ರಷ್ಟು ಗಣಕೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಗೈರು, ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬ0ಧಿಸಿದ0ತೆ ಒಟ್ಟು 2,86,177 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 1,35,875 ಶಾಶ್ವತ ವಲಸೆ ಹಾಗೂ 52,124 ಮರಣ ಹೊಂದಿದ ಪ್ರಕರಣಗಳು, 25,799 ದ್ವಿಪ್ರತಿಗಳು, 70,263 ಗೈರು ಹಾಗೂ ಇತರೆ 2,116 ಸೇರಿವೆ.
69-ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 1,93,387 ನಮೂನೆಗಳು ಗಣಕೀಕೃತಗೊಂಡಿವೆ. 70-ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 1,77,741 ನಮೂನೆಗಳು ಗಣಕೀಕೃತಗೊಂಡಿವೆ. 71-ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ 1,90,910 ನಮೂನೆಗಳು ಗಣಕೀಕೃತಗೊಂಡಿವೆ. 72-ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ 1,78,638 ನಮೂನೆಗಳು ಗಣಕೀಕೃತಗೊಂಡಿವೆ.

73-ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ 1,97,844 ನಮೂನೆಗಳು ಗಣಕೀಕೃತಗೊಂಡಿವೆ. 74-ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ 2,10,527 ನಮೂನೆಗಳು ಗಣಕೀಕೃತಗೊಂಡಿವೆ. 75-ಕಲಘಟಗಿ ವಿಧಾನಸಭಾ ಕ್ಷೇತ್ರದಲಿ 1,86,321 ನಮೂನೆಗಳು ಗಣಕೀಕೃತಗೊಂಡಿವೆ.

ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‍ಒ) ಮತದಾರರ ಮನೆ-ಮನೆಗಳಿಗೆ ಭೇಟಿ ನೀಡಿದ ಅವಧಿಯಲ್ಲಿ ಜಿಲ್ಲೆಯ ಸಾರ್ವಜನಿಕರು, ಮತದಾರರು ತಮ್ಮ ಅವಶ್ಯಕ ಮಾಹಿತಿಗಳನ್ನು ಭರಣಾ ಮಾಡಿದ ಏಣಿಕೆ, ಗಣತಿ ನಮೂನೆಗಳನ್ನು (Enumeration Forms) BLOರವರಿಗೆ ನೀಡಿ ಸಹಕರಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಡಿ.ಸಿ ಅವರ ಫೋಟೊ ಇದೆ)
******
ಯಾದಗಿರಿಯಲ್ಲಿ ಭೂ-ಒಡೆತನ ಯೋಜನೆ ಜಾರಿಗೊಳಿಸಲು ಆಗ್ರಹ: ರೈತರ ಬೆಳೆಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಮನವಿ
ಯಾದಗಿರಿ, ಆ.3: ಸಮತಾ ಸೈನಿಕ ದಳ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂರಾರು ಮಹಿಳೆಯರು ಹಾಗೂ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಭೂ-ಒಡೆತನ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಹಾಗೂ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ಬೆಳೆಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.
ಸಮಿತಿಯ ಮುಖಂಡರು ಮಾತನಾಡಿ, ಜಿಲ್ಲೆಯ ಅನೇಕ ದಲಿತ ಕುಟುಂಬಗಳು ಹಲವು ವರ್ಷಗಳಿಂದ ಕೃಷಿ ಭೂಮಿ ಹಾಗೂ ವಸತಿ ನಿವೇಶನವಿಲ್ಲದೆ ಸಂಕಷ್ಟದಲ್ಲಿದ್ದು, 2019–20ರಲ್ಲಿ ಭೂ-ಒಡೆತನ ಯೋಜನೆಯಡಿ ಭೂಮಿ ಹಂಚಿಕೆ ಪ್ರಕ್ರಿಯೆ ಆರಂಭವಾದರೂ, ಐದು ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು. ಭೂ ಮಾಲೀಕರು ಭೂಮಿ ನೀಡಲು ಒಪ್ಪಿಗೆ ನೀಡಿದ್ದರೂ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ ರಚಿಸದ ಕಾರಣ ಯೋಜನೆ ಸ್ಥಗಿತಗೊಂಡಿದೆ ಎಂದು ದೂರಿದರು.
ಭೂ ಮಾಲೀಕರಿಗೆ ಸರ್ಕಾರ ನಿಗದಿತ ದರದಲ್ಲಿ ಪರಿಹಾರ ನೀಡಿ, ಅರ್ಹ ದಲಿತ ಕುಟುಂಬಗಳಿಗೆ ಭೂಮಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಹತ್ತಿಗೂಡೂರು, ಐಕೂರು, ಮಾಲಹಳ್ಳಿ, ನಾಯ್ಕಲ್, ಚಟ್ನಳ್ಳಿ, ಬಲಕಲ್, ಮರಮಕಲ್, ದೋರನಹಳ್ಳಿ, ಇಂಗಳಗಿ, ಬಸವಂತಪುರ, ಹೈಯ್ಯಾಳ (ಬಿ), ಇಟ್ಟಿಗಿ, ಶಿರವಾಳ, ಕೊಂಗಂಡಿ, ಯಕ್ಷಿತಿ, ಬೊಮ್ಮನಹಳ್ಳಿ, ಅನವರ್, ಕೊಳ್ಳೂರು, ತುಮಕೂರು, ಕಾಡೆಮೆಗೆರ ಸೇರಿದಂತೆ ವಿವಿಧ ಗ್ರಾಮಗಳ ಫಲಾನುಭವಿಗಳನ್ನು ಯೋಜನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಬೆಳೆಸಾಲವನ್ನು ಮನ್ನಾ ಮಾಡಬೇಕು ಹಾಗೂ ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಜಿಲ್ಲೆಯ ಎಲ್ಲಾ ಅರ್ಹ ದಲಿತ ಕುಟುಂಬಗಳಿಗೆ ಮನೆಗಳ ಮಂಜೂರಾತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ.
ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಸಮತಾ ಸೈನಿಕ ದಳದ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ, ಪ್ರತಿಭಟನೆ ಹಾಗೂ ಜನಪ್ರತಿನಿಧಿಗಳ ನಿವಾಸಗಳ ಎದುರು ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹತ್ತಿಗುಡೂರ ಶರಣರಡ್ಡಿ, ಜಿಲ್ಲಾ ಗೌರವಾಧ್ಯಕ್ಷ ಶರಣಪ್ಪ ಕಡಿಮನಿ ಅನಕಸೂಗೂರು, ತಾಲೂಕು ಅಧ್ಯಕ್ಷ ಶರಣಪ್ಪ ಚಲುವಾದಿ, ತಾಲೂಕು ಮುಖಂಡ ಭೀಮರಾಯ ದೋರನಹಳ್ಳಿ ಸೇರಿದಂತೆ ಸಮತಾ ಸೈನಿಕ ದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
📍ವಿಜಯಪುರ | ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗೊಂದಲ..? ಅಭ್ಯರ್ಥಿಗಳ ಆಕ್ರೋಶ, ನ್ಯಾಯಕ್ಕಾಗಿ ಪ್ರತಿಭಟನೆ |
📍ವಿಜಯಪುರ | ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಗೊಂದಲ..? ಅಭ್ಯರ್ಥಿಗಳ ಆಕ್ರೋಶ, ನ್ಯಾಯಕ್ಕಾಗಿ ಪ್ರತಿಭಟನೆ |
ಸಚಿವ ಸಂಪುಟ ಸೇರ್ಪಡೆಗೆ ಆಯ್ಕೆಯಾದ ನಾಯಕರಿಂದ ಸಿದ್ದರಾಮಯ್ಯ ಭೇಟಿ; ಧನ್ಯವಾದ ಸಲ್ಲಿಕೆ
ಬೆಂಗಳೂರು, ಆ.3: ರಾಜ್ಯ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಲಿರುವ ನಾಯಕರು ಹಾಗೂ ವಿಧಾನಸಭೆ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿರುವ ನಾಯಕರು ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದರು.
ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಪುಟ್ಟರಂಗ ಶೆಟ್ಟಿ, ಡಾ. ಅಜಯ್ ಸಿಂಗ್, ನರೇಂದ್ರ ಸ್ವಾಮಿ, ಬಸವರಾಜ ರಾಯರೆಡ್ಡಿ, ಬಸವಂತಪ್ಪ, ರಘುಮೂರ್ತಿ, ಚೆಲುವರಾಯಸ್ವಾಮಿ, ಶಿವಲಿಂಗೇಗೌಡ, ರಿಜ್ವಾನ್ ಅರ್ಷದ್, ಸಂತೋಷ್ ಲಾಡ್ ಹಾಗೂ ಲಕ್ಷ್ಮಣ ಸವದಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದರು. ಇದೇ ವೇಳೆ ವಿಧಾನಸಭೆ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿರುವ ಜಿ.ಎಸ್. ಪಾಟೀಲ್ ಅವರೂ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಲ್ಲ ನಾಯಕರಿಗೂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿ, ಹೊಸ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಂತೆ ಶುಭ ಹಾರೈಸಿದರು. ರಾಜ್ಯದ ಅಭಿವೃದ್ಧಿ ಹಾಗೂ ಜನಪರ ಆಡಳಿತಕ್ಕೆ ಬದ್ಧತೆಯಿಂದ ಕಾರ್ಯನಿರ್ವಹಿಸುವಂತೆ ಅವರು ಸಲಹೆ ನೀಡಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ಈ ಭೇಟಿ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದ್ದು, ನೂತನ ಸಚಿವರು ಶೀಘ್ರದಲ್ಲೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ್ ಮಂತ್ರಿಗಿರಿಗೆ ಕೌಂಟ್‌ಡೌನ್‌..? ಸಂಪುಟದಿಂದ ಔಟ್ ಸಾಧ್ಯತೆ!
​ಕರ್ನಾಟಕ ರಾಜಕೀಯದಲ್ಲಿ ಮತ್ತೆ ತೀವ್ರ ಸಂಚಲನ! ಹೈಕಮಾಂಡ್ ಅಂತಿಮಗೊಳಿಸಿದೆ ಎನ್ನಲಾದ ನೂತನ ಸಂಪುಟ ಪಟ್ಟಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರು ಕೈಬಿಡಲಾಗಿದೆಯೇ? ಈ ಬಾರಿ ಮಂತ್ರಿಗಿರಿ ಕೈತಪ್ಪುವುದು ಬಹುತೇಕ ಖಚಿತವೇ ಎಂಬ ಚರ್ಚೆ ಕೈ ನಾಯಕರಲ್ಲಿ ಜೋರಾಗಿದೆ.
​ಈ ಬಾರಿಯ ಸಂಪುಟ ಪುನಾರಚನೆ ಹಾಗೂ ಪ್ರಮುಖ ನಾಯಕರ ಬದಲಾವಣೆ ಕುರಿತು ನಿಮ್ಮ ಅಭಿಪ್ರಾಯವೇನು?
​👇 ನಿಮ್ಮ ಅನಿಸಿಕೆಯನ್ನು ಕೆಳಗೆ ಕಾಮೆಂಟ್ ಮಾಡಿ ತಿಳಿಸಿ!
ಇಂದು ಸಂಜೆ 5ಕ್ಕೆ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರು ಪ್ರಮಾಣವಚನ ಸ್ವೀಕಾರ

ಬೆಂಗಳೂರು, ಆ. 3: ರಾಜ್ಯ ರಾಜಕೀಯದಲ್ಲಿ ಹಲವು ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಇಂದು ಸಂಜೆ 5 ಗಂಟೆಗೆ ಬೆಂಗಳೂರಿನ ಲೋಕಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ರಾಜಕೀಯ ವಲಯದ ಗಮನ ಈ ಕಾರ್ಯಕ್ರಮದತ್ತ ಕೇಂದ್ರೀಕೃತವಾಗಿದೆ.

ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ತೀವ್ರ ಲಾಬಿ ನಡೆಸಿದ್ದರೆ, ಜಿಲ್ಲಾವಾರು ಪ್ರಾತಿನಿಧ್ಯ, ಜಾತಿ ಸಮತೋಲನ ಹಾಗೂ ಪಕ್ಷದೊಳಗಿನ ಭಿನ್ನಮತ ಶಮನಗೊಳಿಸುವ ನಿಟ್ಟಿನಲ್ಲಿ ಹೈಕಮಾಂಡ್‌ ಸುದೀರ್ಘ ಚರ್ಚೆ ನಡೆಸಿತ್ತು. ಹಲವು ಸುತ್ತಿನ ಸಭೆಗಳ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಅಂತಿಮ ರೂಪ ನೀಡಲಾಗಿದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಕಚೇರಿಯಿಂದ ಕಾರ್ಯಕ್ರಮದ ಸಿದ್ಧತೆಗಳಿಗೆ ಸೂಚನೆ ನೀಡಲಾಗಿದ್ದು, ಇಂದು ಸಂಜೆ ನೂತನ ಸಚಿವರು ರಾಜ್ಯಪಾಲರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನದ ಬಳಿಕ ಖಾತೆ ಹಂಚಿಕೆ ಕುರಿತ ನಿರ್ಧಾರವೂ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ.

ಸಚಿವ ಸಂಪುಟ ಸೇರುವ ಸಾಧ್ಯತೆ ಇರುವ ನಾಯಕರ ಪಟ್ಟಿ:

- ಪಿ.ಎಂ. ನಾರಾಯಣಸ್ವಾಮಿ
- ಶಿವರಾಜ್ ತಂಗಡಗಿ
- ರುದ್ರಪ್ಪ ಲಮಾಣಿ
- ಟಿ. ರಘುಮೂರ್ತಿ
- ಬಿ. ನಾಗೇಂದ್ರ
- ಜಮೀರ್ ಅಹ್ಮದ್ ಖಾನ್
- ರಿಜ್ವಾನ್ ಅರ್ಷದ್
- ಸಂತೋಷ್ ಲಾಡ್
- ಮಧು ಬಂಗಾರಪ್ಪ
- ಪುಟ್ಟರಂಗ ಶೆಟ್ಟಿ
- ಮಂಕಾಳ್ ವೈದ್ಯ
- ಅಜಯ್ ಸಿಂಗ್
- ಚೆಲುವರಾಯಸ್ವಾಮಿ
- ಎಂ. ಶಿವಲಿಂಗೇಗೌಡ
- ಹೆಚ್.ಸಿ. ಬಾಲಕೃಷ್ಣ
- ಶಾಂತವೀರೇಗೌಡ
- ವಿಜಯಾನಂದ ಕಾಶಪ್ಪನವರ್
- ಲಕ್ಷ್ಮಣ್ ಸವದಿ
- ಬಸವರಾಜ್ ರಾಯರೆಡ್ಡಿ

ಆದಾಗ್ಯೂ, ಅಧಿಕೃತ ಪಟ್ಟಿಯನ್ನು ರಾಜ್ಯ ಸರ್ಕಾರ ಅಥವಾ ರಾಜಭವನ ಇನ್ನೂ ಪ್ರಕಟಿಸಿಲ್ಲ. ಆದ್ದರಿಂದ ಮೇಲಿನ ಹೆಸರುಗಳನ್ನು ಸಂಭಾವ್ಯ ಸಚಿವರ ಪಟ್ಟಿ ಎಂದು ಪರಿಗಣಿಸಲಾಗಿದ್ದು, ಪ್ರಮಾಣವಚನ ಕಾರ್ಯಕ್ರಮದ ವೇಳೆ ಅಂತಿಮ ಚಿತ್ರಣ ಸ್ಪಷ್ಟವಾಗಲಿದೆ.
ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಕಳೆದು ಹೋದ ಮೊಬೈಲ್ ಫೋನ್ ಅನ್ನು ಸಿ.ಇ.ಐ.ಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಿಂದುರಿಗಿಸಲಾಗಿರುತ್ತದೆ.

ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಒಂದು ವೇಳೆ ನೀವು ನಿಮ್ಮ ಮೊಬೈಲ್ ಫೋನ್ ಕಳೆದು ಕೊಂಡಲ್ಲಿ, ಮೊಬೈಲ್ ಫೋನ್ ಗೆ ಸಂಬಂಧಪಟ್ಟ ದಾಖಲಾತಿಗಳು, ನಿಮ್ಮ ಗುರುತಿನ ಪುರಾವೆ, KSP Mobile App ಮೂಲಕ ಪೊಲೀಸ್ ಕಂಪ್ಲೆಂಟ್ ಪ್ರತಿ ಪಡೆದು, CEIR ವೆಬ್ ಪೋರ್ಟಲ್: https://www.ceir.gov.in ರಲ್ಲಿ ವರದಿ ದಾಖಲಿಸಲು ಕೋರಿದೆ.
<nis:link nis:type=tag nis:id=cbpdistpolice nis:value=cbpdistpolice nis:enabled=true nis:link/>
<nis:link nis:type=tag nis:id=spcbpura nis:value=Spcbpura nis:enabled=true nis:link/>
<nis:link nis:type=tag nis:id=gbnurrps nis:value=GbnurRps nis:enabled=true nis:link/>
<nis:link nis:type=tag nis:id=ceircbp nis:value=CEIRcbp nis:enabled=true nis:link/>
<nis:link nis:type=tag nis:id=goodwork nis:value=Goodwork nis:enabled=true nis:link/>
<nis:link nis:type=tag nis:id=ceirportal nis:value=CEIRportal nis:enabled=true nis:link/>
ನೂತನ ಸಚಿವರ ಪಟ್ಟಿ
Video 21
ಯಾದಗಿರಿ ನಗರದಲ್ಲಿ ಮಳೆಯ ದೃಶ್ಯ
Video 23
Video 24