Public App Logo
Profile Picture

Yadgir News 7353702080

@mdrafiq790
24Followers
1Following
ವಿಚ್ಛೇದನಕ್ಕೆ ಮುಂದಾಗಿದ್ದ 37 ದಂಪತಿಗಳು ಮತ್ತೆ ಒಂದಾದರು: ನ್ಯಾಯಾಧೀಶರ ಸಮಾಲೋಚನೆಗೆ ಸಾರ್ಥಕ ಫಲ

ದಾವಣಗೆರೆ: ವೈವಾಹಿಕ ಜೀವನದಲ್ಲಿ ಉಂಟಾದ ತೀವ್ರ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯಗಳಿಂದ ಬೇಸತ್ತು ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ 37 ದಂಪತಿಗಳು, ನ್ಯಾಯಾಧೀಶರ ಸತತ ಸಮಾಲೋಚನೆ ಹಾಗೂ ಮಾರ್ಗದರ್ಶನದ ಬಳಿಕ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮತ್ತೆ ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದ್ದಾರೆ.

ದಾಂಪತ್ಯ ಜೀವನದಲ್ಲಿ ಪರಸ್ಪರ ಗೌರವ, ನಂಬಿಕೆ, ಹೊಂದಾಣಿಕೆ ಹಾಗೂ ಕುಟುಂಬದ ಮಹತ್ವವನ್ನು ನ್ಯಾಯಾಧೀಶರು ದಂಪತಿಗಳಿಗೆ ಮನವರಿಕೆ ಮಾಡಿಕೊಟ್ಟರು. ಈ ಸಮಾಲೋಚನೆಯಿಂದ ಪ್ರೇರಿತರಾದ ದಂಪತಿಗಳು ತಮ್ಮ ಹಳೆಯ ಕಹಿ ಘಟನೆಗಳನ್ನು ಮರೆತು ಹೊಸ ಜೀವನ ಆರಂಭಿಸಲು ಒಮ್ಮತಕ್ಕೆ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ 37 ಜೋಡಿಗಳು ಒಂದೇ ವೇದಿಕೆಯಲ್ಲಿ ಪರಸ್ಪರ ಮಾಲೆ ಬದಲಾಯಿಸಿಕೊಂಡು, ಮುಂದಿನ ದಿನಗಳಲ್ಲಿ ಪ್ರೀತಿ, ವಿಶ್ವಾಸ ಹಾಗೂ ಒಗ್ಗಟ್ಟಿನಿಂದ ಜೀವನ ಸಾಗಿಸುವ ಸಂಕಲ್ಪ ಮಾಡಿದರು.

ನ್ಯಾಯಾಲಯದ ಕಾನೂನು ಪ್ರಕ್ರಿಯೆಯ ಜತೆಗೆ ಕುಟುಂಬಗಳನ್ನು ಉಳಿಸುವ ಮಾನವೀಯ ಪ್ರಯತ್ನಕ್ಕೆ ಸಿಕ್ಕಿರುವ ಈ ಯಶಸ್ಸಿನಿಂದ 37 ಕುಟುಂಬಗಳು ವಿಚ್ಛೇದನದಿಂದ ಒಡೆಯುವುದನ್ನು ತಪ್ಪಿಸಿದಂತಾಗಿದೆ. ಇದರಿಂದ ದಂಪತಿಗಳ ಮಕ್ಕಳು ಹಾಗೂ ಕುಟುಂಬದ ಹಿರಿಯರ ಮೇಲೆ ಉಂಟಾಗಬಹುದಾದ ಮಾನಸಿಕ ಪರಿಣಾಮಗಳನ್ನೂ ತಡೆಯಲು ಸಾಧ್ಯವಾಗಿದೆ.

ಕೋರ್ಟ್ ಅಂಗಳದಲ್ಲೇ ದಂಪತಿಗಳು ಮತ್ತೆ ಒಂದಾದ ಈ ಅಪರೂಪದ ಕ್ಷಣಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಕುಟುಂಬ ಸಂಬಂಧಗಳನ್ನು ಉಳಿಸುವ ನಿಟ್ಟಿನಲ್ಲಿ ನ್ಯಾಯಾಧೀಶರು ಕೈಗೊಂಡ ಮಾನವೀಯ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

<nis:link nis:type=tag nis:id=davangere nis:value=Davangere nis:enabled=true nis:link/> <nis:link nis:type=tag nis:id=ದಾವಣಗೆರೆ nis:value=ದಾವಣಗೆರೆ nis:enabled=true nis:link/> <nis:link nis:type=tag nis:id=familycourt nis:value=FamilyCourt nis:enabled=true nis:link/> <nis:link nis:type=tag nis:id=ವಿಚ್ಛೇದನ nis:value=ವಿಚ್ಛೇದನ nis:enabled=true nis:link/> <nis:link nis:type=tag nis:id=ದಾಂಪತ್ಯಜೀವನ nis:value=ದಾಂಪತ್ಯಜೀವನ nis:enabled=true nis:link/> <nis:link nis:type=tag nis:id=ಕುಟುಂಬಸಂಬಂಧ nis:value=ಕುಟುಂಬಸಂಬಂಧ nis:enabled=true nis:link/> <nis:link nis:type=tag nis:id=ನ್ಯಾಯಾಲಯ nis:value=ನ್ಯಾಯಾಲಯ nis:enabled=true nis:link/> <nis:link nis:type=tag nis:id=ಮತ್ತೆಒಂದಾದದಂಪತಿಗಳು nis:value=ಮತ್ತೆಒಂದಾದದಂಪತಿಗಳು nis:enabled=true nis:link/> <nis:link nis:type=tag nis:id=ಕೌಟುಂಬಿಕಸೌಹಾರ್ದತೆ nis:value=ಕೌಟುಂಬಿಕಸೌಹಾರ್ದತೆ nis:enabled=true nis:link/> <nis:link nis:type=tag nis:id=kannadanews nis:value=KannadaNews nis:enabled=true nis:link/>
ಸಚಿವರಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಅಜಯ್ ಸಿಂಗ್‌ಗೆ ಅದ್ಧೂರಿ ಸ್ವಾಗತ
Video 2
ಜನಶ್ರೀ ಟಿವಿಯ ಯಾದಗಿರಿ ಜಿಲ್ಲಾ ವರದಿಗಾರರಾಗಿ ನಿಜಮುದ್ದಿನ್ ಆಯ್ಕೆ

ಯಾದಗಿರಿ: ಹಲವು ವರ್ಷಗಳಿಂದ ಪತ್ರಿಕಾ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ನಿಜಮುದ್ದಿನ್ ಅವರನ್ನು ಜನಶ್ರೀ ಟಿವಿಯ ಯಾದಗಿರಿ ಜಿಲ್ಲಾ ವರದಿಗಾರರಾಗಿ ಆಯ್ಕೆ ಮಾಡಲಾಗಿದೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ನಿಜಮುದ್ದಿನ್ ಅವರು ಯಾದಗಿರಿ ಜಿಲ್ಲೆಯ ವಿವಿಧ ಸಾಮಾಜಿಕ, ಜನಪರ, ರಾಜಕೀಯ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ನಿರಂತರವಾಗಿ ವರದಿ ಮಾಡುತ್ತಾ ಬಂದಿದ್ದಾರೆ. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಇದೀಗ ತಮ್ಮ ಪತ್ರಿಕಾ ವೃತ್ತಿ ಪಯಣವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಜನಶ್ರೀ ಟಿವಿ ಮಾಧ್ಯಮ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಯಾದಗಿರಿ ಜಿಲ್ಲಾ ವರದಿಗಾರರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳು, ಆಡಳಿತಾತ್ಮಕ ಬೆಳವಣಿಗೆಗಳು, ಸಾಮಾಜಿಕ ವಿಚಾರಗಳು ಸೇರಿದಂತೆ ಪ್ರಮುಖ ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ನಿಜಮುದ್ದಿನ್ ತಿಳಿಸಿದ್ದಾರೆ.

ನಿಜಮುದ್ದಿನ್ ಅವರ ಆಯ್ಕೆಗೆ ಪತ್ರಕರ್ತರು, ಮಾಧ್ಯಮ ಸ್ನೇಹಿತರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಮಾಧ್ಯಮ ಪಯಣಕ್ಕೆ ಶುಭ ಹಾರೈಸಿದ್ದಾರೆ.

<nis:link nis:type=tag nis:id=nizamuddin nis:value=Nizamuddin nis:enabled=true nis:link/> <nis:link nis:type=tag nis:id=janashreetv nis:value=JanashreeTV nis:enabled=true nis:link/> <nis:link nis:type=tag nis:id=yadgir nis:value=Yadgir nis:enabled=true nis:link/> <nis:link nis:type=tag nis:id=yadgirdistrict nis:value=YadgirDistrict nis:enabled=true nis:link/> <nis:link nis:type=tag nis:id=journalist nis:value=Journalist nis:enabled=true nis:link/> <nis:link nis:type=tag nis:id=districtcorrespondent nis:value=DistrictCorrespondent nis:enabled=true nis:link/> <nis:link nis:type=tag nis:id=kannadamedia nis:value=KannadaMedia nis:enabled=true nis:link/> <nis:link nis:type=tag nis:id=journalism nis:value=Journalism nis:enabled=true nis:link/> <nis:link nis:type=tag nis:id=media nis:value=Media nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=ಯಾದಗಿರಿ nis:value=ಯಾದಗಿರಿ nis:enabled=true nis:link/> <nis:link nis:type=tag nis:id=ನಿಜಮುದ್ದಿನ್ nis:value=ನಿಜಮುದ್ದಿನ್ nis:enabled=true nis:link/> <nis:link nis:type=tag nis:id=ಜನಶ್ರೀಟಿವಿ nis:value=ಜನಶ್ರೀಟಿವಿ nis:enabled=true nis:link/> <nis:link nis:type=tag nis:id=ಪತ್ರಿಕೋದ್ಯಮ nis:value=ಪತ್ರಿಕೋದ್ಯಮ nis:enabled=true nis:link/> <nis:link nis:type=tag nis:id=ಮಾಧ್ಯಮ nis:value=ಮಾಧ್ಯಮ nis:enabled=true nis:link/>
https://www.flipkart.com/dipesh-creation-led-solar-motion-sensor-light-outdoor-security-wall-light-dummy-camera-set/p/itmd5aab925d22fe?pid=SLEHGZPURZN5ZHFJ&marketplace=FLIPKART&cmpid=content_appretar_HomeImprovementTool_FittingsAndFixtures_facebook&affid=inf_1bdc1c56-736a-471d-a6b9-b66231b18207
ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ: ಡಾ. ಯತೀಂದ್ರ ಸಿದ್ದರಾಮಯ್ಯ

ಸಿಂದಗಿ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಸಾಧನೆಯನ್ನು ಗೌರವಿಸಿ ಪ್ರೋತ್ಸಾಹಿಸುವುದು ಸಮಾಜದ ಭವಿಷ್ಯವನ್ನು ರೂಪಿಸುವ ಮಹತ್ವದ ಕಾರ್ಯವಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದರು.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ತಾಲ್ಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ದೊರೆತಾಗ ಅವರು ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿರುವ ತಾಲ್ಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘದ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಆದರ್ಶ ಸ್ಮರಣೀಯ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ದೇಶದ ಸ್ವಾತಂತ್ರ್ಯ, ಸ್ವಾಭಿಮಾನ ಹಾಗೂ ನಾಡಿನ ಗೌರವಕ್ಕಾಗಿ ಹೋರಾಡಿದ ಅಪ್ರತಿಮ ವೀರ ಸೇನಾನಿಯಾಗಿದ್ದಾರೆ. ಅವರ ಧೈರ್ಯ, ದೇಶಭಕ್ತಿ, ಶೌರ್ಯ ಮತ್ತು ತ್ಯಾಗದ ಬದುಕು ಇಂದಿನ ಯುವಜನತೆಗೆ ಸದಾ ಸ್ಫೂರ್ತಿಯಾಗಿದೆ. ರಾಯಣ್ಣ ಅವರ ಆದರ್ಶ ಹಾಗೂ ಹೋರಾಟದ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಚಿವರು ತಿಳಿಸಿದರು.

ಸಮಾರಂಭದಲ್ಲಿ ಧಾರವಾಡದ ರೇವಣಸಿದ್ದೇಶ್ವರ ಮಠದ ಶ್ರೀ ಬಸವರಾಜ ದೇವರು ಮನಸೂರು ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು.

ಮಾಜಿ ಸಚಿವರಾದ ಶ್ರೀ ಬಂಡೆಪ್ಪ ಕಾಶಂಪೂರ್, ಮಾಜಿ ಶಾಸಕರಾದ ಶ್ರೀ ರಮೇಶ್ ಭೂಸನೂರು, ಶ್ರೀ ಕಾಂತೇಶ್ ಈಶ್ವರಪ್ಪ, ಶ್ರೀ ರಾಯಪ್ಪ ಇವಣಗಿ, ಡಾ. ಚನ್ನಪ್ಪ ಕಟ್ಟಿ, ಶ್ರೀ ಮಲ್ಲಣ್ಣ ಸಾಲಿ, ಶ್ರೀ ಕಲ್ಲಪ್ಪ ಬಿಸನಾಳ, ಶ್ರೀ ರಮೇಶ್ ಭಂಟನೂರು, ಶ್ರೀ ನಿಂಗಣ್ಣ ಬುಳ್ಳಾ, ಶ್ರೀ ಕನ್ನಯ್ಯ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು, ಮುಖಂಡರು, ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಈದ್ ಮಿಲಾದ್ ಹಿನ್ನೆಲೆ: ಪುಟಪಾಕ್ ಗ್ರಾಮದಲ್ಲಿ ಶಾಂತಿ ಸಭೆ

ಗುರುಮಠಕಲ್: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪುಟಪಾಕ್ ಗ್ರಾಮದಲ್ಲಿ ಇಂದು ಶಾಂತಿ ಸಭೆ ಹಮ್ಮಿಕೊಳ್ಳಲಾಯಿತು.

ಸಭೆಯಲ್ಲಿ ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಆಚರಿಸುವಂತೆ ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಸಾರ್ವಜನಿಕರಿಗೆ ಮನವಿ ಮಾಡಿದರು.

ಗುರುಮಠಕಲ್ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ದೌಲತ್ ಎನ್. ಕುರಿ ಮಾತನಾಡಿ, ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಪರಸ್ಪರ ಸಹಕಾರ, ಸಹಬಾಳ್ವೆ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪೊಲೀಸ್ ಸಿಬ್ಬಂದಿ, ಗ್ರಾಮಸ್ಥರು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

<nis:link nis:type=tag nis:id=eidmilad nis:value=EidMilad nis:enabled=true nis:link/> <nis:link nis:type=tag nis:id=eidmilad2026 nis:value=EidMilad2026 nis:enabled=true nis:link/> <nis:link nis:type=tag nis:id=peacemeeting nis:value=PeaceMeeting nis:enabled=true nis:link/> <nis:link nis:type=tag nis:id=putpakvillage nis:value=PutpakVillage nis:enabled=true nis:link/> <nis:link nis:type=tag nis:id=gurumathkal nis:value=Gurumathkal nis:enabled=true nis:link/> <nis:link nis:type=tag nis:id=yadgir nis:value=Yadgir nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=peaceandharmony nis:value=PeaceAndHarmony nis:enabled=true nis:link/> <nis:link nis:type=tag nis:id=communalharmony nis:value=CommunalHarmony nis:enabled=true nis:link/> <nis:link nis:type=tag nis:id=police nis:value=Police nis:enabled=true nis:link/> <nis:link nis:type=tag nis:id=karnatakanews nis:value=KarnatakaNews nis:enabled=true nis:link/> <nis:link nis:type=tag nis:id=kannadanews nis:value=KannadaNews nis:enabled=true nis:link/> <nis:link nis:type=tag nis:id=ಗುರುಮಠಕಲ್ nis:value=ಗುರುಮಠಕಲ್ nis:enabled=true nis:link/> <nis:link nis:type=tag nis:id=ಪುಟಪಾಕ್ nis:value=ಪುಟಪಾಕ್ nis:enabled=true nis:link/> <nis:link nis:type=tag nis:id=ಈದ್ಮಿಲಾದ್ nis:value=ಈದ್ಮಿಲಾದ್ nis:enabled=true nis:link/> <nis:link nis:type=tag nis:id=ಶಾಂತಿಸಭೆ nis:value=ಶಾಂತಿಸಭೆ nis:enabled=true nis:link/> <nis:link nis:type=tag nis:id=ಸೌಹಾರ್ದತೆ nis:value=ಸೌಹಾರ್ದತೆ nis:enabled=true nis:link/> <nis:link nis:type=tag nis:id=ಯಾದಗಿರಿನ್ಯೂಸ್ nis:value=ಯಾದಗಿರಿನ್ಯೂಸ್ nis:enabled=true nis:link/>
ಇದು ಯಾವ ನಗರ ಕಾಮೆಂಟ್ ಮಾಡಿ
ಇದು ಯಾವ ನಗರ ಕಾಮೆಂಟ್ ಮಾಡಿ
ಮುಂಬರುವ ಈದ್‌ ಮಿಲಾದ್‌ ಹಬ್ಬದ ಹಿನ್ನೆಲೆಯಲ್ಲಿ, ಶಿವಮೊಗ್ಗ  ನಗರದ  ಜಾಮಿಯಾ ಮಸೀದಿಯಲ್ಲಿ ಶಾಂತಿ ಸಮಿತಿ ಸಭೆ ನಡೆಸಲಾಗಿರುತ್ತದೆ.
BREAKING NEWS || ಮಡ್ಡಾಳ್ ಬಳಿ ಭೀಕರ ರಸ್ತೆ ಅಪಘಾತ: ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ

​ಶಹಾಪುರ: ತಾಲೂಕಿನ ಮಡ್ಡಾಳ್ ಗ್ರಾಮದ ಸಮೀಪ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಮೂವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

​ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಶಹಾಪುರ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕಲಬುರಗಿಯ ಆಸ್ಪತ್ರೆಗೆ ತಕ್ಷಣ ಭೇಟಿ ನೀಡಿದರು. ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ಪರಿಸ್ಥಿತಿಯನ್ನು ಖುದ್ದಾಗಿ ವಿಚಾರಿಸಿದ ಅವರು, ಸಂತ್ರಸ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

​ಗಾಯಾಳುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಉತ್ತಮ ವೈದ್ಯಕೀಯ ನೆರವು ಹಾಗೂ ತುರ್ತು ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚನೆ ನೀಡಿದ ಶಾಸಕರು, ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದರು.

​<nis:link nis:type=tag nis:id=shahapur nis:value=Shahapur nis:enabled=true nis:link/> <nis:link nis:type=tag nis:id=accidentnews nis:value=AccidentNews nis:enabled=true nis:link/> <nis:link nis:type=tag nis:id=yadgir nis:value=Yadgir nis:enabled=true nis:link/> <nis:link nis:type=tag nis:id=saranabasappagowdadarshanapur nis:value=SaranabasappaGowdaDarshanapur nis:enabled=true nis:link/> <nis:link nis:type=tag nis:id=mla nis:value=MLA nis:enabled=true nis:link/> <nis:link nis:type=tag nis:id=kalaburagi nis:value=Kalaburagi nis:enabled=true nis:link/> Hospital Visit <nis:link nis:type=tag nis:id=karnatakanews nis:value=KarnatakaNews nis:enabled=true nis:link/> <nis:link nis:type=tag nis:id=shahapurnews nis:value=ShahapurNews nis:enabled=true nis:link/> <nis:link nis:type=tag nis:id=maddalaccident nis:value=MaddalAccident nis:enabled=true nis:link/> <nis:link nis:type=tag nis:id=breakingnewskarnataka nis:value=BreakingNewsKarnataka nis:enabled=true nis:link/>
ವಿವಾಹೇತರ ಸಂಬಂಧದ ಶಂಕೆ: ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ ಆರೋಪ; ಇಬ್ಬರು ಬಂಧನ

ದಾವಣಗೆರೆ: ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವ ಆರೋಪ ದಾವಣಗೆರೆ ಜಿಲ್ಲೆಯಲ್ಲಿ ಕೇಳಿಬಂದಿದೆ. ಕೊಲೆ ಬಳಿಕ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಶೃತಿ ಹಾಗೂ ಆಕೆಯ ಪ್ರಿಯಕರ ಉಬೇದುಲ್ಲಾ ಅವರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಸುರೇಶ್‌ಗಾಗಿ ತನಿಖೆ ಮುಂದುವರಿದಿದೆ.

ಪಾಮೇನಹಳ್ಳಿ ಗ್ರಾಮದ ರಘು (36) ಕೊಲೆಯಾದ ವ್ಯಕ್ತಿ. ಆಗಸ್ಟ್ 11ರಂದು ರಾತ್ರಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ರಘು ಕಾಣೆಯಾಗಿರುವ ಕುರಿತು ಆತನ ಪತ್ನಿ ಶೃತಿ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ವಿಚಾರಣೆ ವೇಳೆ ಪೊಲೀಸರಿಗೆ ಶೃತಿಯ ನಡೆ-ನುಡಿಗಳ ಮೇಲೆ ಅನುಮಾನ ಮೂಡಿದ್ದು, ಆಕೆಯನ್ನು ಕೂಲಂಕಷವಾಗಿ ವಿಚಾರಿಸಿದಾಗ ಪ್ರಕರಣದ ವಿವರಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

12 ವರ್ಷಗಳ ಹಿಂದೆ ಪ್ರೇಮ ವಿವಾಹ

ರಘು ಹಾಗೂ ವಿಜಯಪುರ ಮೂಲದ ಶೃತಿ ಸುಮಾರು 12 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ರಘು ಹಮಾಲಿ ಕೆಲಸ ಮಾಡುತ್ತಿದ್ದರೆ, ಶೃತಿ ಹಾಗೂ ಉಬೇದುಲ್ಲಾ ಗಾರೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸದ ಸಂದರ್ಭದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು, ಬಳಿಕ ಅದು ವಿವಾಹೇತರ ಸಂಬಂಧಕ್ಕೆ ತಿರುಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ರಘುವಿಗೆ ಈ ಸಂಬಂಧದ ಬಗ್ಗೆ ತಿಳಿದು ದಂಪತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರ ಮುಂದಿಟ್ಟುಕೊಂಡು ರಘುವನ್ನು ಕೊಲೆ ಮಾಡಲು ಶೃತಿ ಹಾಗೂ ಉಬೇದುಲ್ಲಾ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕುಡಿಸಿ ಕತ್ತು ಹಿಸುಕಿ ಕೊಲೆ ಆರೋಪ

ಆಗಸ್ಟ್ 11ರಂದು ರಾತ್ರಿ ಉಬೇದುಲ್ಲಾ ತನ್ನ ಸ್ನೇಹಿತ ಸುರೇಶ್‌ನ ಸಹಾಯದಿಂದ ರಘುವಿಗೆ ಮದ್ಯಪಾನ ಮಾಡಿಸಿ, ಆಟೋದಲ್ಲಿ ಹರಿಹರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಗಭದ್ರಾ ನದಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಬಳಿಕ ರಘುವಿನ ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಕ್ಕಾಗಿ ಪೊಲೀಸರು ಹಾಗೂ ಕುಟುಂಬಸ್ಥರು ಹಲವು ದಿನಗಳಿಂದ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಇದುವರೆಗೆ ಮೃತದೇಹ ಪತ್ತೆಯಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಎಸ್ಪಿ ಹೇಳಿದ್ದೇನು?

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ. ಅವರು ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತ್ನಿಯನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪತ್ನಿ ಶೃತಿ ಹಾಗೂ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಉಬೇದುಲ್ಲಾ ಅವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿಯ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮೃತನ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಮೃತದೇಹ ಪತ್ತೆಯಾಗದಿರುವುದರಿಂದ ಕುಟುಂಬಸ್ಥರ ಆತಂಕ

ರಘು ಕುಟುಂಬಸ್ಥರು ಕಳೆದ ಹಲವು ದಿನಗಳಿಂದ ನದಿ ಪ್ರದೇಶದಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಾಲ ಮಾಡಿ ಹುಡುಕಾಟ ನಡೆಸುತ್ತಿದ್ದೇವೆ, ಮೃತದೇಹ ಸಿಕ್ಕರೆ ಅಂತ್ಯಸಂಸ್ಕಾರ ನೆರವೇರಿಸಲು ಸಾಧ್ಯವಾಗುತ್ತದೆ. ಇಬ್ಬರು ಚಿಕ್ಕ ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದು, ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಮೃತದೇಹ ಪತ್ತೆಹಚ್ಚಲು ಶೋಧ ಕಾರ್ಯ ಕೈಗೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಮುಂದುವರಿದಿದೆ.

ಸೂಚನೆ: ಪ್ರಕರಣದ ಆರೋಪಗಳು ತನಿಖೆಯ ಹಂತದಲ್ಲಿದ್ದು, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವವರೆಗೆ ಆರೋಪಿಗಳನ್ನು ನಿರ್ದೋಷಿಗಳೆಂದು ಪರಿಗಣಿಸಲಾಗುತ್ತದೆ.

<nis:link nis:type=tag nis:id=davanagere nis:value=Davanagere nis:enabled=true nis:link/> <nis:link nis:type=tag nis:id=davanagerenews nis:value=DavanagereNews nis:enabled=true nis:link/> <nis:link nis:type=tag nis:id=karnatakanews nis:value=KarnatakaNews nis:enabled=true nis:link/> <nis:link nis:type=tag nis:id=crimenews nis:value=CrimeNews nis:enabled=true nis:link/> <nis:link nis:type=tag nis:id=crimeindavanagere nis:value=CrimeInDavanagere nis:enabled=true nis:link/> <nis:link nis:type=tag nis:id=murdercase nis:value=MurderCase nis:enabled=true nis:link/> <nis:link nis:type=tag nis:id=tungabhadrariver nis:value=TungabhadraRiver nis:enabled=true nis:link/> <nis:link nis:type=tag nis:id=hadadipolice nis:value=HadadiPolice nis:enabled=true nis:link/> <nis:link nis:type=tag nis:id=policeinvestigation nis:value=PoliceInvestigation nis:enabled=true nis:link/> <nis:link nis:type=tag nis:id=murdernews nis:value=MurderNews nis:enabled=true nis:link/> <nis:link nis:type=tag nis:id=kannadanews nis:value=KannadaNews nis:enabled=true nis:link/> <nis:link nis:type=tag nis:id=breakingnews nis:value=BreakingNews nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=yadgirnewskannada nis:value=YadgirNewsKannada nis:enabled=true nis:link/> <nis:link nis:type=tag nis:id=karnatakacrime nis:value=KarnatakaCrime nis:enabled=true nis:link/> <nis:link nis:type=tag nis:id=crimeupdate nis:value=CrimeUpdate nis:enabled=true nis:link/>
40 ಕಿ.ಮೀ. ಸಿನಿಮೀಯ ಚೇಸಿಂಗ್: ಅಂತಾರಾಜ್ಯ ದನಗಳ್ಳರ ಗ್ಯಾಂಗ್‌ಗೆ ಯಾದಗಿರಿ ಪೊಲೀಸರ ಬಿಗ್ ಶಾಕ್

ಯಾದಗಿರಿ, ಆಗಸ್ಟ್ 23: ಕಳೆದ ಎರಡು ವರ್ಷಗಳಿಂದ ರೈತರ ನಿದ್ದೆಗೆಡಿಸಿದ್ದ ಅಂತಾರಾಜ್ಯ ದನಗಳ್ಳರ ಗ್ಯಾಂಗ್‌ನ್ನು ಯಾದಗಿರಿ ಪೊಲೀಸರು ಸಿನಿಮೀಯ ಶೈಲಿಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ದನಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸುಮಾರು 40 ಕಿ.ಮೀ. ದೂರದವರೆಗೆ ಬೆನ್ನಟ್ಟಿ, ಕೊನೆಗೆ ಯರಗೋಳ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಡಗೇರ ತಾಲೂಕು ಸೇರಿದಂತೆ ಯಾದಗಿರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ ಎರಡು ವರ್ಷಗಳಿಂದ ದನಗಳ ಕಳ್ಳತನದ ಪ್ರಕರಣಗಳು ರೈತರಿಗೆ ತಲೆನೋವಾಗಿ ಪರಿಣಮಿಸಿದ್ದವು. ಮನೆಗಳ ಮುಂದೆ ಅಥವಾ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ರಾಸುಗಳನ್ನು ಗುರಿಯಾಗಿಸಿಕೊಂಡಿದ್ದ ಆರೋಪಿಗಳು, ಅವುಗಳಿಗೆ ಅರಿವಳಿಕೆ ಉಂಟುಮಾಡುವ ಇಂಜೆಕ್ಷನ್ ನೀಡಿ ಬಳಿಕ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಕದ್ದ ದನಗಳನ್ನು ಕಸಾಯಿಖಾನೆಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.

ಈ ಸಂಬಂಧ ವಡಗೇರ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿಗಳ ಚಲನವಲನದ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿತ್ತು.

ಕಲಬುರಗಿಯಲ್ಲಿ ನೆಲೆಸಿದ್ದ ಗ್ಯಾಂಗ್

ಆರೋಪಿಗಳು ಕಲಬುರಗಿ ಭಾಗದಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದು, ದನಗಳನ್ನು ಕಳ್ಳತನ ಮಾಡಿದ ಬಳಿಕ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ವೇಗವಾಗಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಆಧರಿಸಿ ವಡಗೇರ ಹಾಗೂ ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದರು.

ಕಳ್ಳರು ಸ್ಕಾರ್ಪಿಯೋ ವಾಹನದಲ್ಲಿ ಪರಾರಿಯಾಗುತ್ತಿರುವುದನ್ನು ಗಮನಿಸಿದ ಪೊಲೀಸರು ಬೆನ್ನಟ್ಟಲು ಆರಂಭಿಸಿದರು. ಹೆದ್ದಾರಿಯಲ್ಲಿ ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಆರೋಪಿಗಳು ವಾಹನದ ವೇಗವನ್ನು ಮತ್ತಷ್ಟು ಹೆಚ್ಚಿಸಿ ಪರಾರಿಯಾಗಲು ಯತ್ನಿಸಿದರು. ಸುಮಾರು 40 ಕಿ.ಮೀ. ದೂರದವರೆಗೆ ಪೊಲೀಸ್ ತಂಡ ಆರೋಪಿಗಳ ವಾಹನವನ್ನು ಬೆನ್ನಟ್ಟಿದೆ.

ಯರಗೋಳ ಬಳಿ ಪೊಲೀಸರ ಸಮಯಪ್ರಜ್ಞೆ

ಆರೋಪಿಗಳು ಅತಿ ವೇಗವಾಗಿ ವಾಹನ ಚಲಾಯಿಸುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಯಾದಗಿರಿ ತಾಲೂಕಿನ ಯರಗೋಳ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವನ್ನು ತಡೆಗಟ್ಟಲು ಕಾರ್ಯತಂತ್ರ ರೂಪಿಸಿದರು. ರಸ್ತೆಗೆ ಅಡ್ಡಲಾಗಿ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಆರೋಪಿಗಳ ವಾಹನವನ್ನು ತಡೆಯಲು ಪೊಲೀಸರು ಮುಂದಾದರು.

ವೇಗವಾಗಿ ಬಂದ ಕಪ್ಪು ಸ್ಕಾರ್ಪಿಯೋ ವಾಹನ ನಿಯಂತ್ರಣ ತಪ್ಪಿ ಜೆಸಿಬಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ವಾಹನಕ್ಕೆ ಭಾರೀ ಹಾನಿಯಾಗಿದ್ದು, ಅದರಲ್ಲಿದ್ದ ಆರೋಪಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಘಟನೆಯ ಬೆನ್ನಲ್ಲೇ ಪೊಲೀಸರು ಸ್ಥಳವನ್ನು ಸುತ್ತುವರಿದು ವಾಹನದಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸರು ತೋರಿದ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಆರು ಮಂದಿ ಬಂಧನ

ಪೊಲೀಸರ ವಶಕ್ಕೆ ಪಡೆದ ಆರೋಪಿಗಳನ್ನು ಹರಿಯಾಣ ಮೂಲದ ಸಮೂನ್, ಅನಿಬ್, ಇರ್ಷಾದ್, ನಪೀಸ್ ಹಾಗೂ ಅಜೀಮ್ ಮತ್ತು ರಾಜಸ್ಥಾನ ಮೂಲದ ನಿತಿನ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳ ವಿರುದ್ಧ ಈ ಹಿಂದೆಯೂ ಪ್ರಕರಣಗಳಿದ್ದವೆಯೇ, ಗ್ಯಾಂಗ್‌ನಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಹಾಗೂ ಕಳ್ಳತನ ಮಾಡಲಾದ ಜಾನುವಾರುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ದನಗಳ ಕಳ್ಳತನದಿಂದ ಆತಂಕಗೊಂಡಿದ್ದ ರೈತರು ಹಾಗೂ ಗ್ರಾಮಸ್ಥರಿಗೆ ಈ ಕಾರ್ಯಾಚರಣೆ ದೊಡ್ಡ ಮಟ್ಟದ ನೆಮ್ಮದಿ ತಂದಿದೆ. ಜಿಲ್ಲೆಯ ವಿವಿಧೆಡೆ ನಡೆದಿರುವ ದನಗಳ ಕಳ್ಳತನ ಪ್ರಕರಣಗಳಿಗೂ ಬಂಧಿತ ಆರೋಪಿಗಳಿಗೂ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅಂತಾರಾಜ್ಯ ದನಗಳ್ಳರ ಗ್ಯಾಂಗ್‌ನ್ನು 40 ಕಿ.ಮೀ. ಬೆನ್ನಟ್ಟಿ ಬಂಧಿಸುವ ಮೂಲಕ ಯಾದಗಿರಿ ಪೊಲೀಸರು ನಡೆಸಿದ ಕಾರ್ಯಾಚರಣೆ ಇದೀಗ ಜಿಲ್ಲೆಯಾದ್ಯಂತ ಗಮನ ಸೆಳೆದಿದೆ.

<nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=yadgiri nis:value=Yadgiri nis:enabled=true nis:link/> <nis:link nis:type=tag nis:id=yadgirpolice nis:value=YadgirPolice nis:enabled=true nis:link/> <nis:link nis:type=tag nis:id=karnatakapolice nis:value=KarnatakaPolice nis:enabled=true nis:link/> <nis:link nis:type=tag nis:id=breakingnews nis:value=BreakingNews nis:enabled=true nis:link/> <nis:link nis:type=tag nis:id=yadgirbreakingnews nis:value=YadgirBreakingNews nis:enabled=true nis:link/> <nis:link nis:type=tag nis:id=cattletheft nis:value=CattleTheft nis:enabled=true nis:link/> <nis:link nis:type=tag nis:id=cattlerustlers nis:value=CattleRustlers nis:enabled=true nis:link/> <nis:link nis:type=tag nis:id=interstategang nis:value=InterstateGang nis:enabled=true nis:link/> <nis:link nis:type=tag nis:id=policeoperation nis:value=PoliceOperation nis:enabled=true nis:link/> <nis:link nis:type=tag nis:id=policechasing nis:value=PoliceChasing nis:enabled=true nis:link/> <nis:link nis:type=tag nis:id=crimenews nis:value=CrimeNews nis:enabled=true nis:link/> <nis:link nis:type=tag nis:id=yadgircrime nis:value=YadgirCrime nis:enabled=true nis:link/> <nis:link nis:type=tag nis:id=vadagera nis:value=Vadagera nis:enabled=true nis:link/> <nis:link nis:type=tag nis:id=yargol nis:value=Yargol nis:enabled=true nis:link/> <nis:link nis:type=tag nis:id=kalaburagi nis:value=Kalaburagi nis:enabled=true nis:link/> <nis:link nis:type=tag nis:id=karnatakanews nis:value=KarnatakaNews nis:enabled=true nis:link/> <nis:link nis:type=tag nis:id=kannadanews nis:value=KannadaNews nis:enabled=true nis:link/> <nis:link nis:type=tag nis:id=ಯಾದಗಿರಿನ್ಯೂಸ್ nis:value=ಯಾದಗಿರಿನ್ಯೂಸ್ nis:enabled=true nis:link/> <nis:link nis:type=tag nis:id=ಯಾದಗಿರಿಪೊಲೀಸ್ nis:value=ಯಾದಗಿರಿಪೊಲೀಸ್ nis:enabled=true nis:link/> <nis:link nis:type=tag nis:id=ದನಗಳ್ಳರು nis:value=ದನಗಳ್ಳರು nis:enabled=true nis:link/> <nis:link nis:type=tag nis:id=ದನಕಳ್ಳತನ nis:value=ದನಕಳ್ಳತನ nis:enabled=true nis:link/> <nis:link nis:type=tag nis:id=ಅಂತಾರಾಜ್ಯಗ್ಯಾಂಗ್ nis:value=ಅಂತಾರಾಜ್ಯಗ್ಯಾಂಗ್ nis:enabled=true nis:link/> <nis:link nis:type=tag nis:id=ಪೊಲೀಸ್_ಕಾರ್ಯಾಚರಣೆ nis:value=ಪೊಲೀಸ್_ಕಾರ್ಯಾಚರಣೆ nis:enabled=true nis:link/>
Video 13
ಸಿಂಧನೂರು ವಿಧಾನಸಭಾ ಕ್ಷೇತ್ರವು ರಾಯಚೂರು ಜಿಲ್ಲೆಯ 58ನೇ ಕ್ಷೇತ್ರವಾಗಿದೆ. 1957ರಿಂದ 2023ರವರೆಗೆ ಆಯ್ಕೆಯಾದ ಶಾಸಕರ ಪಟ್ಟಿ ಹೀಗಿದೆ: �
Elections in India +1
ವರ್ಷ
ಶಾಸಕ
ಪಕ್ಷ
1957
ಬಸವಂತರಾವ್ ಬಸನಗೌಡ
ಕಾಂಗ್ರೆಸ್
1962
ಬಸವಂತರಾವ್ ಬಸನಗೌಡ
ಕಾಂಗ್ರೆಸ್
1967
ಅಮರೇಗೌಡ ಚನ್ನನಗೌಡ
ಪಕ್ಷೇತರ
1972
ಬಸವಂತರಾವ್ ಬಸನಗೌಡ
ಕಾಂಗ್ರೆಸ್
1978
ನಾರಾಯಣಪ್ಪ ಹನುಮಂತಪ್ಪ
ಕಾಂಗ್ರೆಸ್ (ಐ)
1983
ಎಂ. ಮಲ್ಲಪ್ಪ
ಪಕ್ಷೇತರ
1985
ಆರ್. ನಾರಾಯಣಪ್ಪ
ಕಾಂಗ್ರೆಸ್
1989
ಹಂಪನಗೌಡ ಬದ್ರಾಲಿ
ಜನತಾ ದಳ
1994
ಕೆ. ವಿರೂಪಾಕ್ಷಪ್ಪ
ಕಾಂಗ್ರೆಸ್
1999
ಹಂಪನಗೌಡ ಬದ್ರಾಲಿ
ಜೆಡಿಯು
2004
ಹಂಪನಗೌಡ ಬದ್ರಾಲಿ
ಕಾಂಗ್ರೆಸ್
2008
ವೆಂಕಟರಾವ್ ನಾಡಗೌಡ
ಜೆಡಿಎಸ್
2013
ಹಂಪನಗೌಡ ಬದ್ರಾಲಿ
ಕಾಂಗ್ರೆಸ್
2018
ವೆಂಕಟರಾವ್ ನಾಡಗೌಡ
ಜೆಡಿಎಸ್
2023
ಹಂಪನಗೌಡ ಬದ್ರಾಲಿ
ಕಾಂಗ್ರೆಸ್
ಪ್ರಸ್ತುತ ಶಾಸಕ: ಹಂಪನಗೌಡ ಬದ್ರಾಲಿ — ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC). 2023ರ ಚುನಾವಣೆಯಲ್ಲಿ 73,645 ಮತಗಳೊಂದಿಗೆ 21,942 ಮತಗಳ ಅಂತರದಿಂದ ಗೆದ್ದಿದ್ದಾರೆ. �

<nis:link nis:type=tag nis:id=sindhanur nis:value=Sindhanur nis:enabled=true nis:link/> <nis:link nis:type=tag nis:id=sindhanurassembly nis:value=SindhanurAssembly nis:enabled=true nis:link/> <nis:link nis:type=tag nis:id=sindhanurconstituency nis:value=SindhanurConstituency nis:enabled=true nis:link/> <nis:link nis:type=tag nis:id=raichur nis:value=Raichur nis:enabled=true nis:link/> <nis:link nis:type=tag nis:id=raichurdistrict nis:value=RaichurDistrict nis:enabled=true nis:link/> <nis:link nis:type=tag nis:id=karnatakapolitics nis:value=KarnatakaPolitics nis:enabled=true nis:link/> <nis:link nis:type=tag nis:id=karnatakaassembly nis:value=KarnatakaAssembly nis:enabled=true nis:link/> <nis:link nis:type=tag nis:id=karnatakamla nis:value=KarnatakaMLA nis:enabled=true nis:link/> <nis:link nis:type=tag nis:id=mlalist nis:value=MLAList nis:enabled=true nis:link/> <nis:link nis:type=tag nis:id=sindhanurmla nis:value=SindhanurMLA nis:enabled=true nis:link/> <nis:link nis:type=tag nis:id=hampanagoudabadarli nis:value=HampanagoudaBadarli nis:enabled=true nis:link/> <nis:link nis:type=tag nis:id=congress nis:value=Congress nis:enabled=true nis:link/> <nis:link nis:type=tag nis:id=inc nis:value=INC nis:enabled=true nis:link/> <nis:link nis:type=tag nis:id=jds nis:value=JDS nis:enabled=true nis:link/> <nis:link nis:type=tag nis:id=indianpolitics nis:value=IndianPolitics nis:enabled=true nis:link/> <nis:link nis:type=tag nis:id=karnatakapolitics nis:value=KarnatakaPolitics nis:enabled=true nis:link/> <nis:link nis:type=tag nis:id=politicalhistory nis:value=PoliticalHistory nis:enabled=true nis:link/> <nis:link nis:type=tag nis:id=assemblyelections nis:value=AssemblyElections nis:enabled=true nis:link/> <nis:link nis:type=tag nis:id=karnatakaelections nis:value=KarnatakaElections nis:enabled=true nis:link/> <nis:link nis:type=tag nis:id=sindhanurnews nis:value=SindhanurNews nis:enabled=true nis:link/> <nis:link nis:type=tag nis:id=raichurnews nis:value=RaichurNews nis:enabled=true nis:link/> <nis:link nis:type=tag nis:id=karnatakanews nis:value=KarnatakaNews nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=yadgirnewskannada nis:value=YadgirNewsKannada nis:enabled=true nis:link/> <nis:link nis:type=tag nis:id=kannadanews nis:value=KannadaNews nis:enabled=true nis:link/> <nis:link nis:type=tag nis:id=breakingnews nis:value=BreakingNews nis:enabled=true nis:link/> <nis:link nis:type=tag nis:id=politicalnews nis:value=PoliticalNews nis:enabled=true nis:link/> <nis:link nis:type=tag nis:id=electionhistory nis:value=ElectionHistory nis:enabled=true nis:link/>
ಯಾದಗಿರಿ ನಗರಕ್ಕೆ ರೂ. 287.70 ಕೋಟಿ ವೆಚ್ಚದಲ್ಲಿ ಸಮಗ್ರ ಒಳಚರಂಡಿ ಯೋಜನೆ:
ಭೀಮಾ ನದಿಗೆ ಕೊಳಚೆ ನೀರು ಸೇರುವುದು ತಡೆಗಟ್ಟಲು ಕ್ರಮ
=====================
ಯಾದಗಿರಿ, ಆಗಸ್ಟ್.21 (ಕ.ವಾ): ಯಾದಗಿರಿ ನಗರದ ಸಮಗ್ರ ಅಭಿವೃದ್ಧಿ, ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ರೂ. 287.70 ಕೋಟಿ ವೆಚ್ಚದಲ್ಲಿ ಸಮಗ್ರ ಒಳಚರಂಡಿ ವ್ಯವಸ್ಥೆ (Underground Drainage System) ಕಲ್ಪಿಸಲು ಪ್ರಸ್ತಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀ ರಾಹುಲ್ ತುಕಾರಾಮ ಪಾಂಡ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಈಗಾಗಲೇ ತಾಂತ್ರಿಕ ಅನುಮೋದನೆ ಪಡೆಯಲಾಗಿದ್ದು, ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಯೋಜನೆಯಡಿ 9 ಎಂಎಲ್‍ಡಿ ಸಾಮಥ್ರ್ಯದ ಮಲಿನ ನೀರು ಸಂಸ್ಕರಣಾ ಘಟಕ (ಎಸ್‍ಟಿಪಿ) ಸ್ಥಾಪಿಸಲು ಉದ್ದೇಶಿಸಲಾಗಿದೆ.  ಭೀಮಾ ನದಿಯ ಸಮೀಪದಲ್ಲಿ WetWell  ನಿರ್ಮಿಸಿ, ನಗರದ ವಿವಿಧ ಭಾಗಗಳಿಂದ ಹರಿಯುವ ಕೊಳಚೆ ನೀರನ್ನು ಸಂಗ್ರಹಿಸಿ, ಪಂಪ್ ಮೂಲಕ ಎಸ್‍ಟಿಪಿಗೆ ರವಾನಿಸಿ ವೈಜ್ಞಾನಿಕವಾಗಿ ಸಂಸ್ಕರಿಸಲು ಯೋಜಿಸಲಾಗಿದೆ.
ಈ ವ್ಯವಸ್ಥೆ ಜಾರಿಯಾದಲ್ಲಿ ಪ್ರಸ್ತುತ ತೆರೆದ ಚರಂಡಿಗಳಿಂದ ನೇರವಾಗಿ ಭೀಮಾ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿದೆ. ಮಲಿನ ನೀರನ್ನು ಎಸ್‍ಟಿಪಿ ಯಲ್ಲಿ ಸಂಸ್ಕರಿಸಿದ ನಂತರವೇ ನಿಯಮಾನುಸಾರ ವಿಲೇವಾರಿ ಮಾಡುವ ಮೂಲಕ ಭೀಮಾ ನದಿಯ ಜಲ ಮಾಲಿನ್ಯವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.
ಸಮಗ್ರ ಒಳಚರಂಡಿ ವ್ಯವಸ್ಥೆಯ ಅನುಷ್ಠಾನದಿಂದ ಯಾದಗಿರಿ ನಗರದ ಸ್ವಚ್ಚತೆ ಮತ್ತು ನೈರ್ಮಲ್ಯ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಕಂಡುಬರುವುದರ ಜೊತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಉಂಟಾಗಲಿದೆ. ನಗರದಲ್ಲಿ ಮಲಿನ ನೀರಿನ ವೈಜ್ಞಾನಿಕ ನಿರ್ವಹಣೆ ಸಾಧ್ಯವಾಗುವುದರಿಮದ ಪರಿಸರ ಸಂರಕ್ಷಣೆಗೆ ಸಹ ಹೆಚ್ಚಿನ ಆದ್ಯತೆ ದೊರೆಯಲಿದೆ.
  ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತ ತಕ್ಷಣವೇ ಯೋಜನೆ ಅನುμÁ್ಠನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾದಗಿರಿಯನ್ನು ಸ್ವಚ್ಛ, ಸುಂದರ ಹಾಗೂ ಪರಿಸರ ಸ್ನೇಹಿ ನಗರವನ್ನಾಗಿ ಮಾಡಲು ಇದು ಪ್ರಮುಖ ಹೆಜ್ಜೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮಾಡ್ನಾಳ ಬಳಿ ಭೀಕರ ರಸ್ತೆ ಅಪಘಾತ: ಬೊಲೆರೊ ಗೂಡ್ಸ್ ವಾಹನ ಡಿಕ್ಕಿಯಾಗಿ ಮೂವರು ಮೃತ್ಯು

ಶಹಾಪುರ: ಯಾದಗಿರಿ ಜಿಲ್ಲೆಯ ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಡ್ನಾಳ ಗ್ರಾಮದ ಸಮೀಪ ಇಂದು (ಆ.23) ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, 3ರಿಂದ 5 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮಾಡ್ನಾಳ ಹಾಗೂ ಹಳ್ಳಿಸಗರ ಗ್ರಾಮದ ಕೂಲಿ ಕಾರ್ಮಿಕರು ಇಂದು ಬೆಳಗ್ಗೆ ಸುಮಾರು 6.30ಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮಾಡ್ನಾಳ ಗ್ರಾಮಕ್ಕೆ ವಾಪಸ್ ಬರುತ್ತಿದ್ದ ವೇಳೆ, ಬೆಳಗ್ಗೆ ಸುಮಾರು 9ರಿಂದ 9.30ರ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

KA-33 B-5139 ನೋಂದಣಿ ಸಂಖ್ಯೆಯ ಬೊಲೆರೊ ಗೂಡ್ಸ್ ವಾಹನವು ವೇಗವಾಗಿ ಚಲಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಬಳಿಕ ವಾಹನವು ಬಿದ್ದಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ ಎನ್ನಲಾಗಿದೆ.

ವಾಹನದಲ್ಲಿದ್ದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರನ್ನು:

1. ಹೊನ್ನಾನಿಂಗಮ್ಮ (15) – ವಿದ್ಯಾರ್ಥಿನಿ, ಶಹಾಪುರ
2. ಸತ್ಯಮ್ಮ (32) – ಪತಿ ಮಾಳಪ್ಪ, ಮಾಡ್ನಾಳ ಗ್ರಾಮ
3. ಸೌಭಾಗ್ಯ (30) – ಪತಿ ಶೇಖಪ್ಪ, ಮಾಡ್ನಾಳ ಗ್ರಾಮ

ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರ ಪೈಕಿ ಸತ್ಯಮ್ಮ ಅವರ 13 ವರ್ಷದ ಪುತ್ರ ಚಂದ್ರು ಅವರ ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇನ್ನುಳಿದ ಗಾಯಾಳುಗಳಿಗೆ ಶಹಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕೆಲವರನ್ನು ಯಾದಗಿರಿ ಹಾಗೂ ಕಲಬುರಗಿ ನಗರಗಳ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಭೀಮರಾಯನಗುಡಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.

ಬೊಲೆರೊ ವಾಹನದ ಚಾಲಕ ಶೇಖಪ್ಪ, ಮಾಡ್ನಾಳ ಗ್ರಾಮದವರು ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಕರಣ ದಾಖಲಾದ ನಂತರ ಹೆಚ್ಚಿನ ಅಧಿಕೃತ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಲಾಗಿದೆ.

<nis:link nis:type=tag nis:id=ಮಾಡ್ನಾಳ nis:value=ಮಾಡ್ನಾಳ nis:enabled=true nis:link/> <nis:link nis:type=tag nis:id=ರಸ್ತೆಅಪಘಾತ nis:value=ರಸ್ತೆಅಪಘಾತ nis:enabled=true nis:link/> <nis:link nis:type=tag nis:id=ಭೀಕರಅಪಘಾತ nis:value=ಭೀಕರಅಪಘಾತ nis:enabled=true nis:link/> <nis:link nis:type=tag nis:id=ಶಹಾಪುರ nis:value=ಶಹಾಪುರ nis:enabled=true nis:link/> <nis:link nis:type=tag nis:id=ಯಾದಗಿರಿ nis:value=ಯಾದಗಿರಿ nis:enabled=true nis:link/> <nis:link nis:type=tag nis:id=ಭೀಮರಾಯನಗುಡಿಪೊಲೀಸ್ nis:value=ಭೀಮರಾಯನಗುಡಿಪೊಲೀಸ್ nis:enabled=true nis:link/> <nis:link nis:type=tag nis:id=ಮೂವರುಮೃತ nis:value=ಮೂವರುಮೃತ nis:enabled=true nis:link/> <nis:link nis:type=tag nis:id=ಅಪಘಾತ nis:value=ಅಪಘಾತ nis:enabled=true nis:link/> <nis:link nis:type=tag nis:id=ಗಾಯಾಳುಗಳು nis:value=ಗಾಯಾಳುಗಳು nis:enabled=true nis:link/> <nis:link nis:type=tag nis:id=ಕಲಬುರಗಿ nis:value=ಕಲಬುರಗಿ nis:enabled=true nis:link/> <nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=breakingnews nis:value=BreakingNews nis:enabled=true nis:link/> <nis:link nis:type=tag nis:id=karnatakanewstoday nis:value=karnatakanewstoday nis:enabled=true nis:link/>
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
------
ಆಸ್ಪತ್ರೆಯ ಮೂಲಸೌಕರ್ಯ ಬಲವರ್ಧನೆಗೆ ಸೂಕ್ತ ಕ್ರಮ-ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ
=====================
ಯಾದಗಿರಿ, ಆಗಸ್ಟ್. 23 : ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾಧಿಕಾರಿ ಶ್ರೀ ರಾಹುಲ್ ತುಕಾರಾಮ ಪಾಂಡ್ವೆ ಅವರಿಂದು ಭೇಟಿ ನೀಡಿ ಪರಿಶೀಲಿಸಿದ ಅವರು ಸಾರ್ವಜನಿಕರಿಗೆ ಹಾಗೂ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ  ಆಸ್ಪತ್ರೆಯ ವಿವಿಧ ವಿಭಾಗಗಳು, ಮೂಲಸೌಕರ್ಯ ಹಾಗೂ ರೋಗಿಗಳಿಗೆ ಲಭ್ಯವಿರುವ ಸೌಲಭ್ಯಗಳನ್ನು ವೀಕ್ಷಿಸಿದರು.  
ನಂತರ ಮಾತನಾಡಿದ ಜಿಲ್ಲಾದಿಕಾರಿ, ಗರ್ಭಿಣಿಯರಿಗೆ ಸುರಕ್ಷಿತ ಹಾಗೂ ಸುಸಜ್ಜಿತ ಹೆರಿಗೆ ಸೇವೆ ಒದಗಿಸಲು ಹೊಸ ಹೆರಿಗೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ನವಜಾತ ಶಿಶುಗಳಿಗೆ ವಿಶೇಷ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಲು ಹೊಸ Special Newborn Care Unit (SNCU)  ಸ್ಥಾಪಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಮಕ್ಕಳಿಗೆ ತೀವ್ರ ನಿಗಾ ಚಿಕಿತ್ಸೆ ನೀಡಲು ಹೊಸ Paediatric Intensive Care Unit (PICU)  ಸ್ಥಾಪಿಸಲಾಗಿದೆ. ಹೊರರೋಗಿಗಳ ನೋಂದಣಿ ಮತ್ತು ಸೇವೆಗಳನ್ನು ಸುಗಮಗೊಳಿಸಲು ಹೊಸ ಓಪಿಡಿ ಕೌಂಟರ್‍ಗಳನ್ನು ತೆರೆಯಲಾಗಿದೆ. ಆಸ್ಪತ್ರೆಯ ಆವರಣದ ಒಂದು ಭಾಗದ ಚರಂಡಿ ವ್ಯವಸ್ಥೆಯನ್ನು ನವೀಕರಿಸಿ, ಸ್ವಚ್ಛತೆ ಮತ್ತು ನೈರ್ಮಲ್ಯ ಸುಧಾರಿಸಲಾಗಿದೆ. ವಿದ್ಯುತ್ ವ್ಯತ್ಯಯದಿಂದ ತುರ್ತು ಆರೋಗ್ಯ ಸೇವೆಗಳಿಗೆ ತೊಂದರೆಯಾಗದಂತೆ ಹೊಸ ಜನರೇಟರ್ ಅಳವಡಿಸಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಮುಂದಿನ ಹಂತದಲ್ಲಿ ಉಳಿದ ಭಾಗದ ಚರಂಡಿ ನವೀಕರಣ, ಆಸ್ಪತ್ರೆಯ ಕಟ್ಟಡ ಮತ್ತು ಆವರಣದ ಸಮಗ್ರ ನಿರ್ವಹಣೆ, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಸುಧಾರಣೆ, ಅಗತ್ಯ ವೈದ್ಯಕೀಯ ಉಪಕರಣಗಳ ಲಭ್ಯತೆ, ತಯಿ ಮತ್ತು ಮಕ್ಕಳಿಗೆ ಅನುಕೂಲಕರವಾದ ನಿರೀಕ್ಷಣಾ ಪ್ರದೇಶಗಳ ಅಭಿವೃದ್ಧಿ, ವಿದ್ಯುತ್ ಮತ್ತು ಇತರೆ ತುತುಥ ಮೂಲಸೌಕರ್ಯಗಳ ಬಲವರ್ಧನೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಹಂತ ಹಜಂತವಾಗಿ ಕೈಗೊಳ್ಳಲು ಕ್ರಮವಹಿಸಲಾಗುವುದೆಂದರು.
ಆಸ್ಪತ್ರೆಯ ಮಾನವ ಸಂಪನ್ಮೂಲದ ಅಗತ್ಯತೆ, ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಲಭ್ಯತೆ, ತುರ್ತು ಸೇವೆಗಳ ಸಾಮಥ್ರ್ಯ ಹಾಗೂ ರೋಗಿಗಳ ಸೇವಾ ವ್ಯವಸ್ಥೆ ಕುರಿತು ಪರಿಶೀಲಿಸಿ ಅಗತ್ಯವಿರುವಲ್ಲಿ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆಸ್ಪತ್ರೆಯನ್ನು ಇನ್ನುಷ್ಟು ಸುಸಜ್ಜಿತಗೊಳಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ಸಮಯೋಚಿತ ಆರೋಗ್ಯ ಸೇವೆಗಳನ್ನು ಒದಗಿಸುವುದು ಆಡಳಿತದ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಕಳೆದು ಹೋದ ಮೊಬೈಲ್ ಫೋನ್ ಅನ್ನು ಸಿ.ಇ.ಐ.ಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಿಗೆ ಹಿಂದುರಿಗಿಸಲಾಗಿರುತ್ತದೆ.

ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಒಂದು ವೇಳೆ ನೀವು ನಿಮ್ಮ ಮೊಬೈಲ್ ಫೋನ್ ಕಳೆದು ಕೊಂಡಲ್ಲಿ, ಮೊಬೈಲ್ ಫೋನ್ ಗೆ ಸಂಬಂಧಪಟ್ಟ ದಾಖಲಾತಿಗಳು, ನಿಮ್ಮ ಗುರುತಿನ ಪುರಾವೆ, KSP Mobile App ಮೂಲಕ ಪೊಲೀಸ್ ಕಂಪ್ಲೆಂಟ್ ಪ್ರತಿ ಪಡೆದು, CEIR ವೆಬ್ ಪೋರ್ಟಲ್: https://www.ceir.gov.in ರಲ್ಲಿ ವರದಿ ದಾಖಲಿಸಲು ಕೋರಿದೆ.
<nis:link nis:type=tag nis:id=cbpdistpolice nis:value=cbpdistpolice nis:enabled=true nis:link/>
<nis:link nis:type=tag nis:id=spcbpura nis:value=Spcbpura nis:enabled=true nis:link/>
<nis:link nis:type=tag nis:id=cmanirps nis:value=cmaniRps nis:enabled=true nis:link/>
<nis:link nis:type=tag nis:id=ceircbp nis:value=CEIRcbp nis:enabled=true nis:link/>
<nis:link nis:type=tag nis:id=goodwork nis:value=Goodwork nis:enabled=true nis:link/>
<nis:link nis:type=tag nis:id=ceirportal nis:value=CEIRportal nis:enabled=true nis:link/>
40 ಕಿ.ಮೀ. ಸಿನಿಮೀಯ ಚೇಸಿಂಗ್: ಅಂತಾರಾಜ್ಯ ದನಗಳ್ಳರ ಗ್ಯಾಂಗ್‌ಗೆ ಯಾದಗಿರಿ ಪೊಲೀಸರ ಬಿಗ್ ಶಾಕ್

ಯಾದಗಿರಿ, ಆಗಸ್ಟ್ 23: ಕಳೆದ ಎರಡು ವರ್ಷಗಳಿಂದ ರೈತರ ನಿದ್ದೆಗೆಡಿಸಿದ್ದ ಅಂತಾರಾಜ್ಯ ದನಗಳ್ಳರ ಗ್ಯಾಂಗ್‌ನ್ನು ಯಾದಗಿರಿ ಪೊಲೀಸರು ಸಿನಿಮೀಯ ಶೈಲಿಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ದನಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಸುಮಾರು 40 ಕಿ.ಮೀ. ದೂರದವರೆಗೆ ಬೆನ್ನಟ್ಟಿ, ಕೊನೆಗೆ ಯರಗೋಳ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಡಗೇರ ತಾಲೂಕು ಸೇರಿದಂತೆ ಯಾದಗಿರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಳೆದ ಎರಡು ವರ್ಷಗಳಿಂದ ದನಗಳ ಕಳ್ಳತನದ ಪ್ರಕರಣಗಳು ರೈತರಿಗೆ ತಲೆನೋವಾಗಿ ಪರಿಣಮಿಸಿದ್ದವು. ಮನೆಗಳ ಮುಂದೆ ಅಥವಾ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ರಾಸುಗಳನ್ನು ಗುರಿಯಾಗಿಸಿಕೊಂಡಿದ್ದ ಆರೋಪಿಗಳು, ಅವುಗಳಿಗೆ ಅರಿವಳಿಕೆ ಉಂಟುಮಾಡುವ ಇಂಜೆಕ್ಷನ್ ನೀಡಿ ಬಳಿಕ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಕದ್ದ ದನಗಳನ್ನು ಕಸಾಯಿಖಾನೆಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.

ಈ ಸಂಬಂಧ ವಡಗೇರ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿಗಳ ಚಲನವಲನದ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿತ್ತು.

ಕಲಬುರಗಿಯಲ್ಲಿ ನೆಲೆಸಿದ್ದ ಗ್ಯಾಂಗ್

ಆರೋಪಿಗಳು ಕಲಬುರಗಿ ಭಾಗದಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದು, ದನಗಳನ್ನು ಕಳ್ಳತನ ಮಾಡಿದ ಬಳಿಕ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ವೇಗವಾಗಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಆಧರಿಸಿ ವಡಗೇರ ಹಾಗೂ ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದರು.

ಕಳ್ಳರು ಸ್ಕಾರ್ಪಿಯೋ ವಾಹನದಲ್ಲಿ ಪರಾರಿಯಾಗುತ್ತಿರುವುದನ್ನು ಗಮನಿಸಿದ ಪೊಲೀಸರು ಬೆನ್ನಟ್ಟಲು ಆರಂಭಿಸಿದರು. ಹೆದ್ದಾರಿಯಲ್ಲಿ ವಾಹನವನ್ನು ನಿಲ್ಲಿಸಲು ಸೂಚಿಸಿದರೂ ಆರೋಪಿಗಳು ವಾಹನದ ವೇಗವನ್ನು ಮತ್ತಷ್ಟು ಹೆಚ್ಚಿಸಿ ಪರಾರಿಯಾಗಲು ಯತ್ನಿಸಿದರು. ಸುಮಾರು 40 ಕಿ.ಮೀ. ದೂರದವರೆಗೆ ಪೊಲೀಸ್ ತಂಡ ಆರೋಪಿಗಳ ವಾಹನವನ್ನು ಬೆನ್ನಟ್ಟಿದೆ.

ಯರಗೋಳ ಬಳಿ ಪೊಲೀಸರ ಸಮಯಪ್ರಜ್ಞೆ

ಆರೋಪಿಗಳು ಅತಿ ವೇಗವಾಗಿ ವಾಹನ ಚಲಾಯಿಸುತ್ತಿರುವುದರಿಂದ ಪರಿಸ್ಥಿತಿ ಗಂಭೀರವಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಯಾದಗಿರಿ ತಾಲೂಕಿನ ಯರಗೋಳ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನವನ್ನು ತಡೆಗಟ್ಟಲು ಕಾರ್ಯತಂತ್ರ ರೂಪಿಸಿದರು. ರಸ್ತೆಗೆ ಅಡ್ಡಲಾಗಿ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಆರೋಪಿಗಳ ವಾಹನವನ್ನು ತಡೆಯಲು ಪೊಲೀಸರು ಮುಂದಾದರು.

ವೇಗವಾಗಿ ಬಂದ ಕಪ್ಪು ಸ್ಕಾರ್ಪಿಯೋ ವಾಹನ ನಿಯಂತ್ರಣ ತಪ್ಪಿ ಜೆಸಿಬಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ವಾಹನಕ್ಕೆ ಭಾರೀ ಹಾನಿಯಾಗಿದ್ದು, ಅದರಲ್ಲಿದ್ದ ಆರೋಪಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಘಟನೆಯ ಬೆನ್ನಲ್ಲೇ ಪೊಲೀಸರು ಸ್ಥಳವನ್ನು ಸುತ್ತುವರಿದು ವಾಹನದಲ್ಲಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸರು ತೋರಿದ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಆರು ಮಂದಿ ಬಂಧನ

ಪೊಲೀಸರ ವಶಕ್ಕೆ ಪಡೆದ ಆರೋಪಿಗಳನ್ನು ಹರಿಯಾಣ ಮೂಲದ ಸಮೂನ್, ಅನಿಬ್, ಇರ್ಷಾದ್, ನಪೀಸ್ ಹಾಗೂ ಅಜೀಮ್ ಮತ್ತು ರಾಜಸ್ಥಾನ ಮೂಲದ ನಿತಿನ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳ ವಿರುದ್ಧ ಈ ಹಿಂದೆಯೂ ಪ್ರಕರಣಗಳಿದ್ದವೆಯೇ, ಗ್ಯಾಂಗ್‌ನಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಹಾಗೂ ಕಳ್ಳತನ ಮಾಡಲಾದ ಜಾನುವಾರುಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ದನಗಳ ಕಳ್ಳತನದಿಂದ ಆತಂಕಗೊಂಡಿದ್ದ ರೈತರು ಹಾಗೂ ಗ್ರಾಮಸ್ಥರಿಗೆ ಈ ಕಾರ್ಯಾಚರಣೆ ದೊಡ್ಡ ಮಟ್ಟದ ನೆಮ್ಮದಿ ತಂದಿದೆ. ಜಿಲ್ಲೆಯ ವಿವಿಧೆಡೆ ನಡೆದಿರುವ ದನಗಳ ಕಳ್ಳತನ ಪ್ರಕರಣಗಳಿಗೂ ಬಂಧಿತ ಆರೋಪಿಗಳಿಗೂ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಅಂತಾರಾಜ್ಯ ದನಗಳ್ಳರ ಗ್ಯಾಂಗ್‌ನ್ನು 40 ಕಿ.ಮೀ. ಬೆನ್ನಟ್ಟಿ ಬಂಧಿಸುವ ಮೂಲಕ ಯಾದಗಿರಿ ಪೊಲೀಸರು ನಡೆಸಿದ ಕಾರ್ಯಾಚರಣೆ ಇದೀಗ ಜಿಲ್ಲೆಯಾದ್ಯಂತ ಗಮನ ಸೆಳೆದಿದೆ.

<nis:link nis:type=tag nis:id=yadgirnews nis:value=YadgirNews nis:enabled=true nis:link/> <nis:link nis:type=tag nis:id=yadgiri nis:value=Yadgiri nis:enabled=true nis:link/> <nis:link nis:type=tag nis:id=yadgirpolice nis:value=YadgirPolice nis:enabled=true nis:link/> <nis:link nis:type=tag nis:id=karnatakapolice nis:value=KarnatakaPolice nis:enabled=true nis:link/> <nis:link nis:type=tag nis:id=breakingnews nis:value=BreakingNews nis:enabled=true nis:link/> <nis:link nis:type=tag nis:id=yadgirbreakingnews nis:value=YadgirBreakingNews nis:enabled=true nis:link/> <nis:link nis:type=tag nis:id=cattletheft nis:value=CattleTheft nis:enabled=true nis:link/> <nis:link nis:type=tag nis:id=cattlerustlers nis:value=CattleRustlers nis:enabled=true nis:link/> <nis:link nis:type=tag nis:id=interstategang nis:value=InterstateGang nis:enabled=true nis:link/> <nis:link nis:type=tag nis:id=policeoperation nis:value=PoliceOperation nis:enabled=true nis:link/> <nis:link nis:type=tag nis:id=policechasing nis:value=PoliceChasing nis:enabled=true nis:link/> <nis:link nis:type=tag nis:id=crimenews nis:value=CrimeNews nis:enabled=true nis:link/> <nis:link nis:type=tag nis:id=yadgircrime nis:value=YadgirCrime nis:enabled=true nis:link/> <nis:link nis:type=tag nis:id=vadagera nis:value=Vadagera nis:enabled=true nis:link/> <nis:link nis:type=tag nis:id=yargol nis:value=Yargol nis:enabled=true nis:link/> <nis:link nis:type=tag nis:id=kalaburagi nis:value=Kalaburagi nis:enabled=true nis:link/> <nis:link nis:type=tag nis:id=karnatakanews nis:value=KarnatakaNews nis:enabled=true nis:link/> <nis:link nis:type=tag nis:id=kannadanews nis:value=KannadaNews nis:enabled=true nis:link/> <nis:link nis:type=tag nis:id=ಯಾದಗಿರಿನ್ಯೂಸ್ nis:value=ಯಾದಗಿರಿನ್ಯೂಸ್ nis:enabled=true nis:link/> <nis:link nis:type=tag nis:id=ಯಾದಗಿರಿಪೊಲೀಸ್ nis:value=ಯಾದಗಿರಿಪೊಲೀಸ್ nis:enabled=true nis:link/> <nis:link nis:type=tag nis:id=ದನಗಳ್ಳರು nis:value=ದನಗಳ್ಳರು nis:enabled=true nis:link/> <nis:link nis:type=tag nis:id=ದನಕಳ್ಳತನ nis:value=ದನಕಳ್ಳತನ nis:enabled=true nis:link/> <nis:link nis:type=tag nis:id=ಅಂತಾರಾಜ್ಯಗ್ಯಾಂಗ್ nis:value=ಅಂತಾರಾಜ್ಯಗ್ಯಾಂಗ್ nis:enabled=true nis:link/> <nis:link nis:type=tag nis:id=ಪೊಲೀಸ್_ಕಾರ್ಯಾಚರಣೆ nis:value=ಪೊಲೀಸ್_ಕಾರ್ಯಾಚರಣೆ nis:enabled=true nis:link/>
ಹನಿಟ್ರ್ಯಾಪ್‌ಗೆ ಬಲಿಯಾಗಬೇಡಿ! 🚨
ಅಪರಿಚಿತರ ವಿಡಿಯೋ ಕರೆ, ಫೋಟೋ ಅಥವಾ ಸಂದೇಶಗಳಿಗೆ ಎಚ್ಚರಿಕೆ ವಹಿಸಿ.
ಯಾವುದೇ ಅನುಮಾನಾಸ್ಪದ ಘಟನೆ ಎದುರಾದರೆ ತಕ್ಷಣ 1930ಕ್ಕೆ ಕರೆ ಮಾಡಿ.

<nis:link nis:type=tag nis:id=belagavicitypolice nis:value=BelagaviCityPolice nis:enabled=true nis:link/> <nis:link nis:type=tag nis:id=honeytrapawareness nis:value=HoneyTrapAwareness nis:enabled=true nis:link/> <nis:link nis:type=tag nis:id=cybersafety nis:value=CyberSafety nis:enabled=true nis:link/> <nis:link nis:type=tag nis:id=cybercrime nis:value=CyberCrime nis:enabled=true nis:link/> <nis:link nis:type=tag nis:id=karnatakapolice1 nis:value=karnatakapolice1 nis:enabled=true nis:link/>
ಗ್ರಾಮ ಪಂಚಾಯತಿ ನೌಕರರ ನೇಮಕಕ್ಕೆ ಆದೇಶ
ದಂಡದ ಬದಲು ಹೆಲ್ಮೆಟ್ ನೀಡಿದ ಸಂಚಾರಿ ಪೊಲೀಸ್ – ಚಾಲಕರಲ್ಲಿ ಜಾಗೃತಿ
​ಬಸವಕಲ್ಯಾಣ:
ದ್ವಿಚಕ್ರ ವಾಹನ ಅಪಘಾತಗಳಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಸವಾರರು ಜೀವ ಕಳೆದುಕೊಳ್ಳುವುದನ್ನು ತಡೆಯುವ ಉದ್ದೇಶದಿಂದ, ಬೀದರ ಜಿಲ್ಲಾ ಪೊಲೀಸ್ ಹಾಗೂ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಅಪರೂಪದ ಜಾಗೃತಿ ಅಭಿಯಾನವೊಂದನ್ನು ಹಮ್ಮಿಕೊಳ್ಳಲಾಗಿತ್ತು. ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ ವಿಧಿಸುವ ಬದಲು ಉಚಿತವಾಗಿ ಹೆಲ್ಮೆಟ್ ವಿತರಿಸಿ, ರಸ್ತೆ ಸುರಕ್ಷತೆ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
​ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಾನ್ಯ ಪ್ರದೀಪ್ ಗುಂಟಿ (ಐ.ಪಿ.ಎಸ್.) ರವರ ನಿರ್ದೇಶನದಂತೆ ಈ ಕಾರ್ಯಕ್ರಮ ಜರುಗಿತು. ಜಿಲ್ಲೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಸಂಕಲ್ಪದೊಂದಿಗೆ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಶೇಷ ಕಾರ್ಯಚರಣೆ ನಡೆಸಲಾಯಿತು.
​ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ಸುಜಾತಾ ರವರ ನೇತೃತ್ವದಲ್ಲಿ, ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಲ್ಮೆಟ್ ಧರಿಸದೇ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು ನಿಲ್ಲಿಸಿದರು. ಈ ವೇಳೆ ಸವಾರರಿಗೆ ದಂಡ ಹಾಕುವ ಬದಲು, ಹೆಲ್ಮೆಟ್ ವಿತರಿಸಿ ಅವರ ಕುಟುಂಬ ಹಾಗೂ ಅವಲಂಬಿತರ ಭವಿಷ್ಯದ ಬಗ್ಗೆ ಯೋಚಿಸುವಂತೆ ತಿಳಿಹೇಳಿದರು.
​"ಹೆಲ್ಮೆಟ್ ಧರಿಸಿ - ಪ್ರಾಣ ಉಳಿಸಿ" ಎಂಬ ಸಂದೇಶದೊಂದಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಮನವರಿಕೆ ಮಾಡಿದ ಪೊಲೀಸರು, ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಬೀದರ ಜಿಲ್ಲಾ ಪೊಲೀಸರ ಈ ಜನಪರ ಹಾಗೂ ವಿನೂತನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
​ಪೊಲೀಸ್ ವರಿಷ್ಠಾಧಿಕಾರಿಗಳ ಮನವಿ:
"ಜನಸಾಮಾನ್ಯರ ಅಮೂಲ್ಯವಾದ ಪ್ರಾಣ ರಕ್ಷಣೆ ಮಾಡಲು ಬೀದರ ಜಿಲ್ಲಾ ಪೊಲೀಸ್ ಇಲಾಖೆ ಸದಾ ಶ್ರಮಿಸುತ್ತಿದೆ. ರಸ್ತೆ ಸುರಕ್ಷತೆ ಎಂಬುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪೊಲೀಸ್ ಇಲಾಖೆಯ ಈ ಪ್ರಯತ್ನಕ್ಕೆ ಸಂಪೂರ್ಣ ಸಹಕಾರ ನೀಡಬೇಕು."
— ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ.
BREAKING NEWS || ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ತಾಯಿ–ಮಗಳು ನಾಪತ್ತೆ

ವಿಜಯನಗರ: ತುಂಗಭದ್ರಾ ನದಿಯ ಸ್ನಾನಘಟ್ಟದಲ್ಲಿ ಸ್ನಾನ ಮಾಡಲು ತೆರಳಿದ್ದ ತಾಯಿ ಹಾಗೂ ಮಗಳು ನಾಪತ್ತೆಯಾಗಿರುವ ಘಟನೆ ಹಂಪಿ ಪ್ರವಾಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ತಿಳಿದು ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಪತ್ತೆಯಾಗಿರುವ ತಾಯಿ–ಮಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ಸಲಹೆ–ಸೂಚನೆಗಳನ್ನು ನೀಡಿದರು.

ನಾಪತ್ತೆಯಾದವರ ಪತ್ತೆಗಾಗಿ ಪೊಲೀಸ್ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರಿದಿದೆ.

<nis:link nis:type=tag nis:id=112vijayanagara nis:value=112Vijayanagara nis:enabled=true nis:link/> <nis:link nis:type=tag nis:id=igpballari nis:value=IGPBallari nis:enabled=true nis:link/> <nis:link nis:type=tag nis:id=karnatakastatepolice nis:value=KarnatakaStatePolice nis:enabled=true nis:link/> <nis:link nis:type=tag nis:id=dgpkarnataka nis:value=DGPKarnataka nis:enabled=true nis:link/> <nis:link nis:type=tag nis:id=vijayanagarapolice nis:value=VijayanagaraPolice nis:enabled=true nis:link/> <nis:link nis:type=tag nis:id=hampi nis:value=Hampi nis:enabled=true nis:link/> <nis:link nis:type=tag nis:id=tungabhadrariver nis:value=TungabhadraRiver nis:enabled=true nis:link/> <nis:link nis:type=tag nis:id=searchoperation nis:value=SearchOperation nis:enabled=true nis:link/> <nis:link nis:type=tag nis:id=police nis:value=Police nis:enabled=true nis:link/>
ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ನ್ನು ನೀಡಲಾಯಿತು. 112koppal