Download Now Banner

This browser does not support the video element.

ಬಾಗೇಪಲ್ಲಿ: ಪ್ರವಾದಿ ಮಹ್ಮಮದ್ ರ ಶಾಂತಿ,ಸೌಹಾರ್ಧತೆಯನ್ನು ಎಲ್ಲೆಡೆ ಸಾರೋಣ:ಪಟ್ಟಣದಲ್ಲಿ ಪುರಸಭೆಯ ಮಾಜಿ ಸದಸ್ಯ ಮಹಮ್ಮದ್ ನೂರುಲ್ಲಾ

Bagepalli, Chikkaballapur | Sep 5, 2025
ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ವಿಶ್ವದ ಶಾಂತಿ ಧೂತ ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1500 ನೇ ಜನ್ಮದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹಾಗೇಯೆ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ವಿಭಾಗದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಬ್ರೆಡ್,ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಪುರಸಭೆಯ ಸದಸ್ಯ ಡಾ.ಮಹಮ್ಮದ್ ನೂರುಲ್ಲಾ, ಪ್ರವಾದಿಗಳು ಶಾಂತಿ ಧೂತರಾಗಿ ಜಗತ್ತಿಗೆ ಆಗಮಿಸಿ ಇಡೀ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಬೋಧಿಸಿದರು. ಸರ್ವರೊಂದಿಗೆ ಸಹಬಾಳ್ವೆ ಹಾಗೂ ಸೇವಾ ಮನೋಭಾವಕ್ಕೆ ಒತ್ತು ನೀಡಿದರು ಎಂದರು.
Read More News
T & CPrivacy PolicyContact Us