ಅತಿವೃಷ್ಟಿಯಿಂದ ಹಾನಿಗೀಡಾದ ರೈತರ ಪ್ರತಿ ಎಕರೆ ಭೂಮಿಗೆ ₹ 30 ಸಾವಿರ ಪರಿಹಾರಕ್ಕೆ ಅಗ್ರಹಿಸಿ, ನಗರದಲ್ಲಿ ಯುವ ಕ್ರಾಂತಿ ಸಂಘಟನೆಯಿಂದ ಮಂಗಳವಾರ ಮಧ್ಯಾಹ್ನ 1: 15ಕ್ಕೆ ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಸಂಗಮೇಶ್ ಬೋರೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಹಳ್ಳಿಖೇಡಕರ್, ಅಮರ ಸಿಂಧನಕೇರಾ, ಅಪ್ಪುರಾಜ್ ಚತುರೆ, ಮಹೇಶ್ ಕಟ್ಟಿ, ಮನೋಜ್ ಮಾನೆ, ಕರಣ್ ಜಾನ್ವೀರ್, ಅರುಣ್ ಮಣ್ಗೋಜಿ ಇದ್ದರು.