ರಸ್ತೆ ಅಗೆಯುತ್ತಿದ್ದ ಗುತ್ತಿಗೆದಾರನಿಗೆ ಪಾಲಿಕೆ ಸದಸ್ಯ ಹಾಗೂ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡ ಘಟನೆ ವಿಜಯಪುರ ನಗರದಲ್ಲಿ ಗುರುವಾರ ಮಧ್ಯಾಹ್ನ 2ಗಂಟೆ ಸುಮಾರಿಗೆ ನಡೆದಿದೆ. ಯಾವದೇ ಅನುಮತಿ ಪತ್ರ ತೋರಿಸದೇ ಗ್ಯಾಸ್ ಪೈಪ್ ಅಳವಡಿಸಲು ನಡೆಯುತ್ತಿದ್ದ ಕಾಮಗಾರಿಯು ವಾರ್ಡ್ ನಂ.32. ರಲ್ಲಿ ನಡೆಯುತ್ತಿತ್ತು ಪಾಲಿಕೆ ಸದಸ್ಯರ ಗಮನಕ್ಕೆ ತಾರದೆ ರಾತ್ರಿಯಲ್ಲಿ ರಸ್ತೆ ಅಗೆಯುತ್ತಿದ್ದರು. ಹೀಗಾಗಿ ವಾರ್ಡ್ ನಂ.32 ರ ಸದಸ್ಯ ಶಿವರುದ್ರ ಬಾಗಲಕೋಟ ತರಾಟೆಗೆ ತೆಗೆದುಕೊಂಡರು. ಈ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಎರಡು ಗಂಟೆ ಕಾಯ್ದರೂ ಬಾರದ ಅಧಿಕಾರಿಗ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.