Download Now Banner

This browser does not support the video element.

ಬಾಗಲಕೋಟೆ: ಅಲೆಮಾರಿ ಕುರಿಗಾಹಿಗಳ ಬದುಕಿಗೆ ಕಾನೂನು ರಕ್ಷಣೆ ಮಸೂದೆ ಸ್ವಾಗತಾರ್ಹ: ನಗರದಲ್ಲಿ ಕರ್ನಾಟಕ ಪ್ರದೇಶ ಕುರುಬರ ಪದವೀಧರರ ಸಂಘ

Bagalkot, Bagalkot | Aug 26, 2025
ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ಹಿತರಕ್ಷಣೆಗೆ ಸರ್ಕಾರ ಮಂಡಿಸಿರುವ ಕಾಯ್ದೆ ಮಸೂದೆಗೆ ಕರ್ನಾಟಕ ಪ್ರದೇಶ ಕುರುಬರ ಪದವೀಧರರ ಸಂಘ ತೀವ್ರ ಸಂತೋಷ ವ್ಯಕ್ತಪಡಿಸಿ ಸ್ವಾಗತಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ನಾಯಕರಾದ ಯಂಕಣ್ಣ ಬಬಲಾದಿ ಹಾಗೂ ಹಣಮಂತ ಯಮಗಾರ ಮಾತನಾಡಿ, "ರಾಜ್ಯದ ನಾನಾ ಭಾಗಗಳಲ್ಲಿ ಕುರಿಗಾಹಿಗಳು ಅನ್ಯಾಯ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಹೊಸದಿಲ್ಲ. ಆದರೆ ಇಂತಹ ಅನಾಹುತಗಳನ್ನು ತಡೆಯಲು ಪರಿಣಾಮಕಾರಿ ಕಾನೂನು ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿತ್ತು ಎಂದರು.
Read More News
T & CPrivacy PolicyContact Us